masthmagaa.com:
ನಿಜ ಹೇಳ್ಬೇಕು ಅಂದ್ರೆ ನಂಗೆ ಅಧಿಕಾರದ ಮೇಲೆ ಆಸೆಯೇ ಇಲ್ಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸದಾ ಅಧಿಕಾರ ಬೇಕು ಅಂತ ಹವಣಿಸೋ ಸಾಕಷ್ಟು ಜನ ಈ ದೇಶದಲ್ಲಿ ತುಂಬಿ ಹೋಗಿದ್ದಾರೆ. ಅದ್ರಲ್ಲಿ ನಂಗೊಂದು ಸಮಸ್ಯೆ ಇದೆ, ನಾನು ಅಧಿಕಾರದ ಮಧ್ಯದಲ್ಲಿ ಜನಿಸಿದೆ. ವಿಚಿತ್ರ ಅಂದ್ರೆ ನಂಗೆ ಅದರಲ್ಲಿ ಆಸಕ್ತಿಯೇ ಇಲ್ಲ. ಇದು ನಿಜ. ನಾನು ರಾತ್ರಿ ಮಲಗಿದಾಗ ದೇಶವನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸ್ತೀನಿ. ಒಬ್ಬ ಪ್ರೇಮಿ ತಾನಿ ಇಷ್ಟಪಡುವ ವ್ಯಕ್ತಿಯನ್ನ ಹೇಗೆ ಅರ್ಥ ಮಾಡಿಕೊಳ್ತಾನೋ ಅದೇಥರ ನಾನು ದೇಶವನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸ್ತೀನಿ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಇನ್ನು ಯುಪಿ ಚುನಾವಣೆ ವೇಳೆ ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಬಿಎಸ್ಪಿ ನಾಯಕಿ ಮಾಯಾವತಿಗೆ ನಾವು ಮೆಸೇಜ್ ಪಾಸ್ ಮಾಡಿದ್ವಿ. ಆದ್ರೆ ಅದ್ಕೆ ಅವರು ಕ್ಯಾರೇ ಅನ್ನಲಿಲ್ಲ. ಈ ಮೂಲಕ ಯುಪಿಯಲ್ಲಿ ಬಿಜೆಪಿ ದಾರಿಯನ್ನ ಸುಗಮ ಮಾಡಿದ್ರು. ಇದಕ್ಕೆಲ್ಲಾ ಸಿಬಿಐ, ಇಡಿ ಮತ್ತು ಪೆಗಾಸಸ್ ಬಗ್ಗೆ ಅವರಿಗಿರೋ ಭಯನೇ ಕಾರಣ ಎಂದಿದ್ದಾರೆ.
-masthmagaa.com
Contact Us for Advertisement