masthmagaa.com:
ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ಗೆ ಪ್ರಧಾನಿ ಮೋದಿ ಕಣ್ಣೀರ ವಿದಾಯ ಕೊಟ್ಟ ಬಳಿಕ ಗುಲಾಂ ನಬಿ ಆಜಾದ್ ವಿದಾಯದ ಭಾಷಣ ಮಾಡುವಾಗ ಪಾಕಿಸ್ತಾನ ವಿಚಾರ ಮತ್ತು ಕಾಶ್ಮೀರ ವಿಚಾರವನ್ನ ಪ್ರಸ್ತಾಪಿಸಿದ್ರು. ಏನಂದ್ರು ಅಂದ್ರೆ, ‘ನಾನು ಸ್ವಾತಂತ್ರ್ಯ ಸಿಕ್ಕ ಬಳಿಕ ಹುಟ್ಟಿದ್ದೇನೆ. ಆದ್ರೆ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬ. ಪಾಕಿಸ್ತಾನದಲ್ಲಿ ಯಾವ ರೀತಿಯ ಪರಿಸ್ಥಿತಿ ಅನ್ನೋ ಬಗ್ಗೆ ನಾನು ಓದಿದಾಗ ನಾನೊಬ್ಬ ಹಿಂದೂಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ ಅನಿಸುತ್ತೆ. ಜೊತೆಗೆ ಯಾವುದೇ ದೇಶದ ಮುಸಲ್ಮಾನನಿಗೆ ಹಿಂದೂಸ್ತಾನಿ ಮುಸಲ್ಮಾನನ ರೀತಿ ಗೌರವ ಸಿಗಬೇಕು. ಅಫ್ಘನಿಸ್ತಾನ, ಇರಾಕ್ ಮುಂತಾದ ಕೆಲ ಮುಸ್ಲಿಂ ದೇಶಗಳಲ್ಲಿ ಹಿಂದೂಗಳಿಲ್ಲ, ಕ್ರಶ್ಚಿಯನ್ನರಿಲ್ಲ ಅಥವಾ ಬೇರೆ ಧರ್ಮದವರಿಲ್ಲ. ಆದ್ರೆ ಅವರವರೇ ಹೊಡೆದಾಡಿಕೊಂಡು ದೇಶವೇ ನಾಶವಾಗುತ್ತಿರೋದನ್ನ ನೋಡಿದ್ದೀವಿ. ಕೆಲವೊಂದು ದೇಶದಲ್ಲಿ ಕೆಟ್ಟ ಸಂಸ್ಕೃತಿ ಇದೆ. ಅಂತಹ ಸಂಸ್ಕೃತಿ ನಮ್ಮ ದೇಶದಲ್ಲಿ ಬಾರದೇ ಇರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.