masthmagaa.com:
ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ಕಾರ್ಪೊರೇಟ್ಗೊಳಿಸಿದ್ರು ಅಂತ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಮಹಾತ್ಮ ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹದ 92ನೇ ವಾರ್ಷಿಕೋತ್ಸವದ ಅಂಗವಾಗಿ ಅಹ್ಮದಾಬಾದ್ನ ಕೋಚ್ರಬ್ ಆಶ್ರಮದಿಂದ 12 ಮಂದಿ ಸೈಕ್ಲಿಸ್ಟ್ಗಳು ದಂಡಿಗೆ ಹೊರಟಿದ್ದಾರೆ. ಈ ವೇಳೆ ದಾರಿಯುದ್ದಕ್ಕೂ ಗಾಂಧೀಜಿ ಚಿಂತನೆಗಳನ್ನು ಹರಡೋದು ಅವರ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಅಮಿತ್ ಸಾ. ಭಾರತ ಮೊದಲಿಂದಲೂ ಗಾಂಧೀಜಿ ಚಿಂತನೆಯಲ್ಲೇ ಸಾಗಿದೆ. ಆದ್ರೆ ಗಾಂಧೀಜಿ ತೋರಿಸಿದ್ದ ಹಾದಿಯಿಂದ ವಿಮುಖರಾಗಿದ್ವಿ. ಆದ್ರೀಗ ಪ್ರಧಾನಿ ಮೋದಿ ಸರ್ಕಾರದ ಯೋಜನೆಗಳಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹಾತ್ಮ ಗಾಂಧಿ ಚಿಂತನೆಗಳನ್ನು ಅಳವಡಿಸಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement