ರಾಜ್ಯ ಕಾಂಗ್ರೆಸ್‌ ವಿರುದ್ದ ಶಿವಮೊಗ್ಗದಲ್ಲಿ ಕಿಡಿಕಾರಿದ ಪಿಎಂ ಮೋದಿ!

masthmagaa.com:

ಲೋಕಸಭೆ ಚುನಾವಣೆಯ ಪ್ರಚಾರ ನಿಮಿತ್ಯ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ‌ ರಾಜ್ಯ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ರೋಡ್‌ ಶೋ ಮೂಲದ ಪ್ರಚಾರ ಸಭೆಗೆ ಆಗಮಿಸಿದ ಮೋದಿ, ಸುಳ್ಳು ಹೋಳೊದೆ ಕಾಂಗ್ರೆಸ್‌ ಪಕ್ಷದ ಬಂಡವಾಳ ಅಂತ ಟೀಕಿಸಿದ್ದಾರೆ. ಅಲ್ದೇ ರಾಜ್ಯದಲ್ಲಿ 4 ಸಿಎಂಗಳಿದ್ದಾರೆ. ಇಬ್ಬರು ಸಿಎಂಗಳು ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ. ಮತ್ತೊಬ್ಬ ಸೂಪರ್‌ ಸಿಎಂ ಹಾಗೂ ಇನ್ನೊರ್ವ ಶಾಡೊ ಸಿಎಂ ಕೂಡ ಇದ್ದಾರೆ. ಇವ್ರೆಲ್ಲರ ಮೇಲೆ ದಿಲ್ಲಿಯಲ್ಲಿ ಒರ್ವ ಕಲೆಕ್ಷನ್‌ ಮಂತ್ರಿ ಕೂತಿದ್ದಾರೆ. ರಾಜ್ಯವನ್ನ ಲೂಟಿ ಮಾಡೋದೆ ಇವ್ರ ಕೆಲ್ಸ. ತಮ್ಮ ಅಸಾಮರ್ಥ್ಯಕ್ಕಾಗಿ ಕೇಂದ್ರ ಸರ್ಕಾರದ ವಿರುದ್ದವೇ ಆರೋಪ ಮಾಡ್ತಿದ್ದಾರೆ ಅಂತ ಮೋದಿ ಮಾತಿನ ಛಾಟಿ ಬೀಸಿದ್ದಾರೆ.

-masthmagaa.com

Contact Us for Advertisement

Leave a Reply