masthmagaa.com:
ಬುಡಕಟ್ಟು ಜನಾಂಗದ ನಾಯಕ ದಿವಂಗತ ಬಿರ್ಸಾ ಮುಂಡಾರ ಜನ್ಮ ದಿನೋತ್ಸವ ಹಿನ್ನಲ್ಲೆ ಮುಂಡಾರ ಸ್ವಗ್ರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮುಂಡಾರವರ ಸ್ವಗ್ರಾಮ ʼಉಳಿಹಾತುʼಗೆ ಭೇಟಿ ನೀಡಿದ ಮೊದಲ ಪ್ರಧಾನಮಂತ್ರಿ ಅನ್ನೋ ಖ್ಯಾತಿಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಬಳಿಕ ದೇಶದಲ್ಲಿನ ಬುಡಕಟ್ಟು ಜನಾಂಗಗಳ ಏಳಿಗೆಗಾಗಿ 24 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನ ದುರ್ಬಲ ಬುಡಕಟ್ಟು ಜನಾಂಗಗಳ ಅಭಿವೃದ್ದಿ (PM PVTG)ಗಾಗಿ ಮೋದಿ ಲಾಂಚ್ ಮಾಡಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿನ ಮುಂಡಾರ ಸಾಧನೆಗಳ ಸ್ಮರಣಾರ್ಥವಾಗಿ ಆಚರಿಸುವ “ಜನಜಾತೀಯ ಗೌರವ ದಿವಸ್” ಕಾರ್ಯಕ್ರಮದಲ್ಲಿ ಭಾಗಿಯಾದರು.
-masthmagaa.com
Contact Us for Advertisement