masthmagaa.com:
ಅಭಿಮಾನಿಗಳ ಯುದ್ಧಗಳು ಅಥ್ವಾ ಫ್ಯಾನ್ ವಾರ್ ಸಾಮಾನ್ಯವಾದದ್ದಲ್ಲ. ಇದು ಹಲವು ದಶಕಗಳಿಂದ ಎಲ್ಲಾ ಇಂಡಸ್ಟ್ರಿಯಲ್ಲೂ ಇರುವಂತ ಸಮಸ್ಯೆ. ಮೊದಲು ಸ್ವಲ್ಪ ಆರೋಗ್ಯಕರ ರೀತಿಯಲ್ಲಿ ನಡೆಯುತ್ತಿತ್ತು ಆದರೆ ಈಗ ದಿನದಿಂದ ದಿನಕ್ಕೆ ಅಭಿಮಾನಿಗಳು ಬೇರೆ ಹೀರೋಗಳ ಅಭಿಮಾನಿಗಳನ್ನು ನಿಂದಿಸುವುದು ಮತ್ತು ಅವರ ಜೊತೆ ಜಗಳಕ್ಕೆ ಹೋಗೋದು ಮಾಡ್ತಾ ಇದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪ್ರಭಾಸ್ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅವರ ಅಭಿಮಾನಿಯನ್ನು ರಾಡ್ನಿಂದ ಹೊಡೆದಿದ್ದಾನೆ.
ಸಣ್ಣ ಭಿನ್ನಾಭಿಪ್ರಾಯ ಜಗಳಕ್ಕೆ ತಿರುಗಿ ಕೊನೆಗೆ ಹೊಡೆದಾಟದಲ್ಲಿ ಅಂತ್ಯ ಆಗಿದೆ. ಏಲೂರಿನ ಕಿಶೋರ್ ಮತ್ತು ಹರಿಕುಮಾರ್ ಎಂಬ ಇಬ್ಬರು ಕಾರ್ಮಿಕರು ಪೇಂಟಿಂಗ್ ಕೆಲಸಕ್ಕಾಗಿ ಹೋಗಿದ್ದರು. ಕೆಲಸದಿಂದ ಬಂದ ನಂತರ ಇವರಿಬ್ಬರ ನಡುವೆ ಫೇವರೇಟ್ ನಟರ ಬಗ್ಗೆ ಮಾತುಕತೆ ಶುರುವಾಯಿತು. ಕಿಶೋರ್ ಪವನ್ ಕಲ್ಯಾಣ್ ಬಗ್ಗೆ ತಮ್ಮ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ್ದ. ಹರಿಕುಮಾರ್, ಪವನ್ ಕಲ್ಯಾಣ್ ಬಗ್ಗೆ ಡೆಲೀಟ್ ಮಾಡಿ ಪ್ರಭಾಸ್ ಬಗ್ಗೆ ಹಾಕು ಅಂತ ಒತ್ತಾಯಿಸ್ತಾನೆ . ಈ ಚೇಂಜಸ್ ಮಾಡೋಕೆ ಕಿಶೋರ್ ಒಪ್ಪೋದಿಲ್ಲ. ನಂತರ ಇವರಿಬ್ಬರ ಮಾತು ಜಗಳಕ್ಕೆ ತಿರುಗತ್ತೆ ಕಿಶೋರ್ ಒಪ್ಪದೇ ಇದ್ದಿದ್ದಕ್ಕೆ ಕೋಪಗೊಂಡ ಹರಿಕುಮಾರ್ ಕಿಶೋರ್ ತಲೆ ಮತ್ತು ಮುಖದ ಮೇಲೆ ಸೆಂಟ್ರಿಂಗ್ ರಾಡ್ನಿಂದ ಹೊಡೆದಿದ್ದಾನೆ. ಕಿಶೋರ್ ಗಾಯಗೊಂಡಿದ್ದು, ಹರಿಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ. 2016ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಎನ್ಟಿಆರ್ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅಭಿಮಾನಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಂದಿದ್ದ.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಹರಿಕುಮಾರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
-masthmagaa.com
Contact Us for Advertisement