masthmagaa.com:
ಬಿಹಾರದ ಪಾಟ್ನಾದಿಂದ ದೆಹಲಿಗೆ ಹೋಗ್ತಿದ್ದ ರೈಲಿನಲ್ಲಿ ಕೇವಲ ಒಳಉಡುಪು ಹಾಕ್ಕೊಂಡು ಓಡಾಡಿ ಸುದ್ದಿಯಾಗಿದ್ದ ಜೆಡಿಯು ಶಾಸಕ ಗೋಪಾಲ್ ಮಂಡಲ್ ವಿರುದ್ಧ ಸಹ ಪ್ರಯಾಣಿಕರೊಬ್ರು ದೆಹಲಿಯಲ್ಲಿ ದೂರು ದಾಖಲಿಸಿದ್ದಾರೆ. ಎಂಎಲ್ಎ ಸಾಹೇಬ್ರು ಮದ್ಯದ ಅಮಲಿನಲ್ಲಿದ್ರು, ನನ್ನ ರಿಂಗ್ ಮತ್ತು ಗೋಲ್ಡ್ ಚೈನ್ ಅನ್ನ ಕಿತ್ತುಕೊಳ್ಳೋಕೆ ಪ್ರಯತ್ನಪಟ್ರು. ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ರು ಅಂತ ಆ ವ್ಯಕ್ತಿ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನ ಕೇಳ್ದಾಗ, ತನಿಖೆ ನಡೀತಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement