masthmagaa.com:
ಮಂಗಳವಾರ ಅಂದ್ರೆ 5ನೇ ದಿನಕ್ಕೆ ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ ಬಿಡುವ ಕಾರ್ಯ ನಡೆಯಲಿದೆ. ಹೀಗಾಗಿ ಅಲ್ಲಿವರೆಗೆ ಕಂಠೀರವ ಸ್ಟುಡಿಯೋ ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಪುನೀತ್ ಸಮಾಧಿ ದರ್ಶನಕ್ಕೆ ಸಾರ್ವಜನಿಕರ ಪ್ರವೇಶವನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಬಗ್ಗೆ ಮಾತನಾಡಿರೋ ರಾಘವೇಂದ್ರ ರಾಜ್ಕುಮಾರ್, ಲಾಸ್ಟ್ ಟೈಂ ಅಪ್ಪಾಜಿದು ಆದಾಗ ಕೆಲವರು ನಮಗಿಂತ ಮೊದಲೇ ಹಾಲು ತುಪ್ಪ ಬಿಟ್ಟಿದ್ರು. ಇನ್ನೂ ಕೆಲವರು ಮಣ್ಣನ್ನೇ ತೋಡಿಬಿಟ್ಟಿದ್ರು. ಹೀಗಾಗಿ ಕುಟುಂಬಸ್ಥರು ಹಾಲು ತುಪ್ಪು ಬಿಟ್ಟ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಅದಕ್ಕೆ ಸರ್ಕಾರದವರು ವ್ಯವಸ್ಥೆ ಮಾಡಿಕೊಡ್ತಾರೆ. ಅಲ್ಲಿವರೆಗೆ ಸಹಕರಿಸಿ ಅಂತ ಹೇಳಿದ್ರು.
-masthmagaa.com
Contact Us for Advertisement