masthmagaa.com:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ರಾಮಮಂದಿರ ಆಹ್ವಾನಕ್ಕೆ ಅರ್ಹ ಅಲ್ಲ ಅಂತೇಳಲಾಗ್ತಿದೆ. ಯಾಕಂದ್ರೆ ರಾಮ ಮಂದಿರ ಟ್ರಸ್ಟ್ ರಾಜಕೀಯ ವ್ಯಕ್ತಿಗಳಿಗೆ ಆಹ್ವಾನ ನೀಡೋಕೆ ಮೂರು ಮಾನದಂಡಗಳನ್ನ ಇಟ್ಕೊಂಡಿದೆ. ಅದ್ರಲ್ಲಿ ಪ್ರಮುಖ ಪಕ್ಷಗಳ ಅಧ್ಯಕ್ಷರು, ವಿಪಕ್ಷಗಳ ನಾಯಕರು ಹಾಗೂ 1984ರಿಂದ 1992ರವರೆಗೆ ರಾಮಮಂದಿರ ಚಳುವಳಿಯಲ್ಲಿ ಭಾಗಿಯಾಗಿದ್ದೋರಿಗೆ ಆಹ್ವಾನ ನೀಡಲಾಗತ್ತೆ ಅಂತ ನಿರ್ಧರಿಸಲಾಗಿತ್ತು. ಸದ್ಯ ರಾಹುಲ್ ಹಾಗೂ ಪ್ರಿಯಾಂಕ ಈ ಯಾವೊಂದು ಗುಂಪಿಗೂ ಸೇರದೇ ಇರೋದ್ರಿಂದ, ಆಹ್ವಾನಕ್ಕೆ ಅರ್ಹ ಅಲ್ಲ ಅಂತ ವಿಶ್ಲೇಷಿಸಲಾಗ್ತಿದೆ. ಹಾಗೆ ನೋಡಿದ್ರೆ ಗಾಂಧಿ ಕುಟುಂಬದಿಂದ ಸೋನಿಯಾ ಗಾಂಧಿ ಅವ್ರಿಗೆ ಮಾತ್ರ ರಾಮಮಂದಿರ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಅಂತ ಸೋನಿಯಾ ಗಾಂಧಿಗೆ ಆಹ್ವಾನ ನೀಡಲಾಗಿದೆ.
-masthmagaa.com
Contact Us for Advertisement