masthmagaa.com:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವ್ರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಭಾರತ ಜೋಡೋ ನ್ಯಾಯ ಯಾತ್ರೆ ಬಿಹಾರದಿಂದ ಪಶ್ಚಿಮ ಬಂಗಾಳಕ್ಕೆ ಬರೋ ವೇಳೆ ಮಾಲ್ಡಾ ಎಂಬಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಕಾರಿನ ಗಾಜು ಪುಡಿ ಪುಡಿಯಾಗಿದೆ. ಆದ್ರೆ ರಾಹುಲ್ ಈ ವೇಳೆ ಬಸ್ ಒಂದರಲ್ಲಿ ರೋಡ್ ಶೋ ಮಾಡ್ತಿದ್ರು. ಇನ್ನು ಈ ಘಟನೆಗೆ ಸರಿಯಾದ ಭದ್ರತೆ ಇಲ್ಲದಿರೋದೇ ಕಾರಣ ಅಂತ ಕಾಂಗ್ರೆಸ್ ಆರೋಪಿಸಿದೆ. ಪೋಲೀಸಿನೋರು ಸಿಎಂ ಮಮತಾ ಅವ್ರ ರ್ಯಾಲಿಯಲ್ಲಿ ಬ್ಯುಸಿಯಾಗಿದ್ದಾರೆ. ಕಾಂಗ್ರೆಸ್ ಯಾತ್ರೆಗೆ ಬಹಳ ಕಡಿಮೆ ಪೊಲೀಸರನ್ನ ನಿರೋಜನೆ ಮಾಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿದೆ. ಇತ್ತ ಈ ಬಗ್ಗೆ ರಿಯಾಕ್ಟ್ ಮಾಡಿರೋ ಬೆಂಗಾಲ್ ಸಿಎಂ ಮಮತಾ ಬ್ಯಾನರ್ಜಿ, ಘಟನೆ ನಡೆದಿರೋದು ಪಶ್ಚಿಮ ಬಂಗಾಳದಲ್ಲಿ ಅಲ್ಲ. ಬಿಹಾರ್ನ ಕರಿಹಾರ್ನಲ್ಲಿ ಅಂದಿದ್ದಾರೆ.
-masthmagaa.com
Contact Us for Advertisement