ರೈತ ಹೋರಾಟಗಾರ ರಾಕೇಶ್ ಟಿಕೈತ್​​​ ಬಾಯಲ್ಲಿ ರಾಜಕೀಯ ಮಾತುಗಳು!

masthmagaa.com:

ಇಷ್ಟು ದಿನ ರೈತ ಹೋರಾಟದಲ್ಲಿ ಭಾಗಿಯಾಗ್ತಿದ್ದ ಭಾರತ್ ಕಿಸಾನ್ ಯೂನಿಯನ್ ಲೀಡರ್ ರಾಕೇಶ್ ಟಿಕೈತ್​ ಈಗ ರಾಜಕೀಯ ಹೇಳಿಕೆಗಳನ್ನು ನೀಡೋಕೆ ಶುರು ಮಾಡಿದ್ದಾರೆ. ಮಥುರಾದಲ್ಲಿ ಯಾವುದೇ ಪಕ್ಷವನ್ನು ಉಲ್ಲೇಖಿಸದೇ ಮಾತಾಡಿದ ಅವರು, ಇವರಿಗೆ ವೋಟ್ ಸಿಗ್ತಿಲ್ಲ ಅಂತ ಮಥುರಾದಲ್ಲಿನ ಶಾಂತಿಯನ್ನು ಹಾಳು ಮಾಡೋಕೆ ಯತ್ನಿಸ್ತಿದ್ದಾರೆ. ಮಥುರಾವನ್ನು ಮುಜಾಫರ್​​ನಗರವನ್ನಾಗಿ ಮಾಡಲು ಬಿಡಬೇಡಿ. ಅವರ ಜಾಲದಲ್ಲಿ ಸಿಲುಕಿದ್ರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜನ ಕೆಲಸ ಕಳೆದುಕೊಳ್ತಾರೆ. ಮಥುರಾದಲ್ಲಿ ದಂಗೆಯ ಪರಿಸ್ಥಿತಿ ನಿರ್ಮಾಣವಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply