masthmagaa.com:
ಇಷ್ಟು ದಿನ ರೈತ ಹೋರಾಟದಲ್ಲಿ ಭಾಗಿಯಾಗ್ತಿದ್ದ ಭಾರತ್ ಕಿಸಾನ್ ಯೂನಿಯನ್ ಲೀಡರ್ ರಾಕೇಶ್ ಟಿಕೈತ್ ಈಗ ರಾಜಕೀಯ ಹೇಳಿಕೆಗಳನ್ನು ನೀಡೋಕೆ ಶುರು ಮಾಡಿದ್ದಾರೆ. ಮಥುರಾದಲ್ಲಿ ಯಾವುದೇ ಪಕ್ಷವನ್ನು ಉಲ್ಲೇಖಿಸದೇ ಮಾತಾಡಿದ ಅವರು, ಇವರಿಗೆ ವೋಟ್ ಸಿಗ್ತಿಲ್ಲ ಅಂತ ಮಥುರಾದಲ್ಲಿನ ಶಾಂತಿಯನ್ನು ಹಾಳು ಮಾಡೋಕೆ ಯತ್ನಿಸ್ತಿದ್ದಾರೆ. ಮಥುರಾವನ್ನು ಮುಜಾಫರ್ನಗರವನ್ನಾಗಿ ಮಾಡಲು ಬಿಡಬೇಡಿ. ಅವರ ಜಾಲದಲ್ಲಿ ಸಿಲುಕಿದ್ರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜನ ಕೆಲಸ ಕಳೆದುಕೊಳ್ತಾರೆ. ಮಥುರಾದಲ್ಲಿ ದಂಗೆಯ ಪರಿಸ್ಥಿತಿ ನಿರ್ಮಾಣವಾಗುತ್ತೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement