masthmagaa.com:
ರಾಮೇಶ್ವರಂ ಕೆಫೆ ಸ್ಫೋಟದ ವಿಚಾರವಾಗಿ ತನಿಖೆ ಚುರುಕುಗೊಳಿಸಿರೊ ರಾಷ್ಟ್ರೀಯ ತನಿಖಾ ದಳ(NIA) ಶಿವಮೊಗ್ಗದ ತೀರ್ಥಹಳ್ಳಿಯ ಒಟ್ಟು 5 ಕಡೆ ರೇಡ್ ನಡೆಸಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾ ನಗರ, ಬೆಟಮಕ್ಕಿ, ಸೇರಿದಂತೆ ಒಟ್ಟು 5 ಕಡೆ ಶಂಕಿತ ವ್ಯಕ್ತಿಗಳ ಮನೆ ಮೇಲೆ NIA ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಇನ್ನು ಇದೇ ವಿಚಾರವಾಗಿ ಅತ್ತ ಚೆನ್ನೈನಲ್ಲೂ 3 ಕಡೆ ದಾಳಿ ನಡೆಸಿ, ಉಗ್ರ ಬೆಂಬಲಿತ ಶಂಕಿತರ ಮನೆಗಳಲ್ಲಿ NIA ಶೋಧ ನಡೆಸಿದೆ.
-masthmagaa.com
Contact Us for Advertisement