masthmagaa.com:
ಭಾರತದಲ್ಲಿದ್ದ ತನ್ನ ರಾಜತಾಂತ್ರಿ ಅಧಿಕಾರಿಗಳನ್ನ ಮರಳಿ ಕರೆಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿಕೆಯನ್ನ ಭಾರತ ಸರ್ಕಾರ ಖಂಡಿಸಿದೆ. ಈ ಬಗ್ಗೆ ರಿಯಾಕ್ಟ್ ಮಾಡಿರುವ ವಿದೇಶಾಂಗ ಸಚಿವಾಲಯ, ಕೆನಡಾದಲ್ಲಿ ಎಷ್ಟು ಸಂಖ್ಯೆಯಲ್ಲಿ ಭಾರತೀಯ ರಾಜತಾಂತ್ರಿಕರಿದ್ದಾರೋ, ಅಷ್ಟೇ ಸಂಖ್ಯೆಯ ಕೆನಡಾ ರಾಜತಾಂತ್ರಿಕರು ಭಾರತದಲ್ಲಿರಬೇಕು. ಈ ನಿಟ್ಟಿನಲ್ಲಿ ಪ್ಯಾರಿಟಿಯನ್ನ ಜಾರಿಗೊಳಿಸೋ ಉದ್ದೇಶದಿಂದ ಅಂದ್ರೆ ಉಭಯ ದೇಶಗಳಲ್ಲಿ ರಾಜತಾಂತ್ರಿಕರ ಸಂಖ್ಯೆಯಲ್ಲಿ ಸಮಾನತೆಯನ್ನ ಕಾಪಾಡೋ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಅಂತ ಪ್ರಾಜೆಕ್ಟ್ ಮಾಡಿದ್ರೆ ಅಥವಾ ಬಿಂಬಿಸೋ ಪ್ರಯತ್ನ ಪಟ್ರೆ ಭಾರತ ಅದನ್ನ ರಿಜೆಕ್ಟ್ ಮಾಡುತ್ತೆ ಅಂತ ತಿಳಿಸಿದೆ.
-masthmagaa.com
Contact Us for Advertisement