masthmagaa.com:
ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ್ತಿರೊ ಆರೋಪದ ಹಿನ್ನೆಲೆ ಮನೆಯೊಂದಕ್ಕೆ ಬಜರಂಗ ದಳ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅಲ್ಲಿನ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿನ ಪಾದ್ರಿ ಮನೆಯೊಂದರಲ್ಲಿ ಪ್ರತಿ ಭಾನುವಾರ ಹಿಂದೂಗಳನ್ನ ಕರೆಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗ್ತಿತ್ತು ಅಂತ ಆರೋಪ ಮಾಡಲಾಗಿದೆ. ಹಿಂದೂಗಳಿಗೆ ಬೈಬಲ್ ನೀಡಿ ಪ್ರಾರ್ಥನೆ ಮಾಡಿಸಲಾಗ್ತಿತ್ತು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಬಜರಂಗದಳದವ್ರು ದಾಳಿ ಮಾಡಿ ಆಕ್ರೋಶವನ್ನ ಹೊರಹಾಕಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿನ ಕ್ರೈಸ್ತ ಮುಖಂಡ ಹಾಗೂ ಕೆಲವರನ್ನ ವಶಕ್ಕೆ ಪಡೆದಿರೋದಾಗಿ ಹೇಳಲಾಗಿದೆ.
-masthmagaa.com
Contact Us for Advertisement