ಮುಂದಿನ ವರ್ಷ ಐಪಿಎಲ್​​ಗೂ ಧೋನಿ ವಿದಾಯ?

masthmagaa.com:

ತಮಿಳುನಾಡಿನ ಚೆನ್ನೈನಲ್ಲಿ ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಪಿಎಲ್​ ವಿಕ್ಟರಿ ಸೆಲಬ್ರೇಷನ್​ ಕಾರ್ಯಕ್ರಮ ನಡೀತು. ಕಾರ್ಯಕ್ರಮದಲ್ಲಿ ಸಿಎಸ್​ಕೆ ನಾಯಕ ಎಂ.ಎಸ್​. ಧೋನಿ, ತಮಿಳುನಾಡು ಸಿಎಂ ಸ್ಟಾಲಿನ್​, ಬಿಸಿಸಿಐ ಸೆಕ್ರೆಟರಿ ಜೇ ಶಾ, ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಮುಂತಾದವರು ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, ನಾನು ನನ್ನ ಕ್ರಿಕೆಟ್​ ಅನ್ನ ಸದಾ ಪ್ಲಾನ್​ ಮಾಡ್ತಿದ್ದೆ. ನನ್ನ ಕೊನೇ ಮ್ಯಾಚ್ ಅನ್ನ ಆಡಿದ್ದು ರಾಂಚಿಯಲ್ಲಿ. ನನ್ನ ಕೊನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನ ತವರು ನೆಲವಾದ ರಾಂಚಿಯಲ್ಲಿ ಆಡಿದ್ದೆ. ಸೋ ಹೋಪ್​ಫುಲಿ, ನನ್ನ ಕೊನೇ ಟಿ20 ಮ್ಯಾಚ್​ ಚೆನ್ನೈನಲ್ಲಿ ಇರಬಹುದು. ಅದು ಮುಂದಿನ ವರ್ಷವೇ ಆಗಿರಬಹುದು ಅಥವಾ 5 ವರ್ಷದ ನಂತ್ರ ಇರಬೋದು. ನಮ್ಗೆ ನಿಜವಾಗಿಯೂ ಗೊತ್ತಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply