masthmagaa.com:
ತಮಿಳುನಾಡಿನ ಚೆನ್ನೈನಲ್ಲಿ ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಪಿಎಲ್ ವಿಕ್ಟರಿ ಸೆಲಬ್ರೇಷನ್ ಕಾರ್ಯಕ್ರಮ ನಡೀತು. ಕಾರ್ಯಕ್ರಮದಲ್ಲಿ ಸಿಎಸ್ಕೆ ನಾಯಕ ಎಂ.ಎಸ್. ಧೋನಿ, ತಮಿಳುನಾಡು ಸಿಎಂ ಸ್ಟಾಲಿನ್, ಬಿಸಿಸಿಐ ಸೆಕ್ರೆಟರಿ ಜೇ ಶಾ, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಮುಂತಾದವರು ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, ನಾನು ನನ್ನ ಕ್ರಿಕೆಟ್ ಅನ್ನ ಸದಾ ಪ್ಲಾನ್ ಮಾಡ್ತಿದ್ದೆ. ನನ್ನ ಕೊನೇ ಮ್ಯಾಚ್ ಅನ್ನ ಆಡಿದ್ದು ರಾಂಚಿಯಲ್ಲಿ. ನನ್ನ ಕೊನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನ ತವರು ನೆಲವಾದ ರಾಂಚಿಯಲ್ಲಿ ಆಡಿದ್ದೆ. ಸೋ ಹೋಪ್ಫುಲಿ, ನನ್ನ ಕೊನೇ ಟಿ20 ಮ್ಯಾಚ್ ಚೆನ್ನೈನಲ್ಲಿ ಇರಬಹುದು. ಅದು ಮುಂದಿನ ವರ್ಷವೇ ಆಗಿರಬಹುದು ಅಥವಾ 5 ವರ್ಷದ ನಂತ್ರ ಇರಬೋದು. ನಮ್ಗೆ ನಿಜವಾಗಿಯೂ ಗೊತ್ತಿಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement