ಕಿಚ್ಚ ಆಯ್ತು ಈಗ ರಿಷಬ್ ಶೆಟ್ಟಿ BJPಗೆ ?!

masthmagaa.com:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಗೆ ಸಾರಿ.., i beg your pardon.. ಬೊಮ್ಮಾಯಿ ಮಾಮ ಗೆ ಚುನಾವಣಾ ಪ್ರಚಾರದಲ್ಲಿ ಸಹಾಯ ಮಾಡ್ತೀನಿ, ಬೊಮ್ಮಾಯಿ ಮಾಮ ಯಾರ್ಯಾರಿಗೆ ಕ್ಯಾಂಪೇನ್ ಮಾಡು ಅಂತ ಹೇಳ್ತಾರೋ ಅವರಿಗೆಲ್ಲ ಕ್ಯಾಂಪೇನ್ ಮಾಡ್ತೀನಿ ಅಂತ ಮೊನ್ನೆ ಮೊನ್ನೆ ಅಷ್ಟೇ ಅನೌನ್ಸ್ ಮಾಡಿದ್ರು. ಈಗ ಸದ್ಯಕ್ಕೆ ಬಿಜೆಪಿ ಪರವಾಗಿ ಮತ್ತೊಬ್ಬ ಕನ್ನಡದ ಸ್ಟಾರ್ ನಟ ಸ್ಟಾರ್ ಪ್ರಚಾರಕರಾಗುವ ಸೂಚನೆ ಸಿಕ್ಕಿದೆ.

ಈ ವಿಷಯವನ್ನ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬಹಿರಂಗಪಡಿಸಿದ್ದಾರೆ. Yes, ನೀವು ಕೇಳ್ತಾ ಇರೋದು ನಿಜಾನೆ, ಬೊಮ್ಮಾಯಿ ಪ್ರಕಾರ ಬಿಜೆಪಿ ಪಕ್ಷದ ತತ್ವ, ಸಿದ್ಧಾಂತಗಳನ್ನು ಇಷ್ಟ ಪಟ್ಟಿರೋದು ಬೇರೆ ಯಾರೂ ಅಲ್ಲ, ನಮ್ಮ ನಿಮ್ಮೆಲ್ಲರ ಪ್ರೀತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. Actually Rishab shetty ಅವರು ನಾನು ಬಿಜೆಪಿ ಪಕ್ಷಕ್ಕೆ ಪ್ರಚಾರ ಮಾಡ್ತೀನಿ ಅಂತ ಅಫಿಶಿಯಲ್ ಆಗಿ ಯಾವುದೇ ಸ್ಟೇಟ್ ಮೆಂಟ್ ಕೊಟ್ಟಿಲ್ಲ. ಆದ್ರೆ ಬೊಮ್ಮಾಯಿ ಅವರ ಪ್ರಕಾರ ರಿಷಬ್ ಶೆಟ್ಟಿ ಅವರಿಗೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ಹಿಡಿಸಿವೆ ಅಂತ ಮಾತ್ರ ಈಗ ಸಧ್ಯಕ್ಕೆ ಸಿಕ್ಕಿರುವ ಮಾಹಿತಿ. ಹಾಗಾಗಿ ಮುಂದೆ ರಿಷಬ್ ಬಿಜೆಪಿಗೆ ಬೆಂಬಲ ಘೋಷಿಸಿ ಪ್ರಚಾರ ಮಾಡುವ ಚಾನ್ಸಸ್ ಇದೆ ಅಂತ ನಾವು ಅಂದುಕೋಬಹುದು.

ಇನ್ನು ಕಾಂತಾರ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆದ್ಮೇಲೆ ರಿಷಬ್‌ ಶೆಟ್ಟಿ ರಾಜಕೀಯ ಪಕ್ಷ ಸೇರಿಕೊಳ್ಳುತ್ತಾರೆ ಅನ್ನೋ ವದಂತಿ ಹಬ್ಬಿತ್ತು. ಅಲ್ಲದೇ ಅವರು ದೇವಸ್ಥಾನಗಳಿಗೆ ಹೋಗ್ತಾ ಇದ್ದಿದ್ದು ರಾಜಕೀಯ ಪಕ್ಷ ಸೇರುವ ಸಲುವಾಗಿಯೇ ಅಂತ ಕೂಡ ಸುದ್ದಿ ಆಗಿತ್ತು. ಅಷ್ಟೇ ಅಲ್ಲದೇ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಿಷಬ್‌ ಶೆಟ್ಟಿ ರಾಷ್ಟ್ರೀಯ ಪಕ್ಷವೊಂದಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಪ್ರಬಲವಾಗಿ ಕೇಳಿಬರುತ್ತಿತ್ತು. ಇನ್ನೇನು ಶೀಘ್ರದಲ್ಲಿ ಇದರ ಘೋಷಣೆ ಕೂಡ ಆಗತ್ತೆ, ಕೆಲ ಮೂಲಗಳ ಪ್ರಕಾರ ಬಿಜೆಪಿಯಿಂದಲೇ ರಿಷಬ್‌ ಕಣಕ್ಕಿಳಿಯುತ್ತಾರೆ ಅಂತ ಕೂಡ ಹೇಳಲಾಗುತ್ತಿತ್ತು.

ಆದ್ರೆ ಇತ್ತೀಚೆಗಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ರಾಜಕೀಯ ಸೇರುವ ತಮ್ಮ ಡಿಸಿಷನ್‌ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು.

ರಾಜಕೀಯಕ್ಕೆ ಬರ್ತೀರಾ ಅಂತ ಪ್ರಶ್ನೆ ಕೇಳಿದ ಟ್ವೀಟ್ ಗೆ
ರಿಷಬ್ ಶೆಟ್ಟಿ, ಸುಮ್ನನೆ ಇರಿ ಮರ್ರೆ, ಇದೆಲ್ಲಾ ಸುಳ್ಳು ಸುದ್ದಿ, ಇವತ್ತು ಎಪ್ರಿಲ್‌ ಫಸ್ಟ್‌ , ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದರು. ಆದ್ರೆ ಈಗ ಬೊಮ್ಮಾಯಿ ಈ ರೀತಿ ಹೇಳಿಕೆ ಕೊಟ್ಟಿರೋದು ಸಾಕಷ್ಟು ಕುತೂಹಲ ಕೆರಳಿಸುತ್ತಿದೆ.

rishab ಶೆಟ್ಟರು ಈಗ ನಿಜಕ್ಕೂ ಬಿಜೆಪಿ ಗೆ ಸಪೋರ್ಟ್ ಮಾಡ್ತಾರ, ಅಥವಾ ಅವರೇ ಪಕ್ಕಕ್ಕೆ ಸೇರಿಕೊಳ್ತಾರ ಅನ್ನೋದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಾಗಿದೆ.

-masthmagaa.com

Contact Us for Advertisement

Leave a Reply