masthmagaa.com:
ಬೆಂಗಳೂರು ನಗರದ ನೀರಿನ ಸಮಸ್ಯೆ ವಿಚಾರವಾಗಿ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ನೋಡಲ್ ಅಧಿಕಾರಿಯನ್ನ ನೇಮಿಸಿದ್ದಾರೆ. ಈ ವಿಚಾರ ಈಗ ರಾಜಕೀಯ ತಿರುವು ಪಡ್ಕೊಂಡಿದೆ. ಡಿಸಿಎಂ ತಮ್ಮ ತಮ್ಮಯ್ಯನಾದ ಡಿಕೆ ಸುರೇಶ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರೋ ಪ್ರದೇಶಕ್ಕೆ ಮಾತ್ರ ಅಧಿಕಾರಿ ನೇಮಿಸಿ ಮಲತಾಯಿ ಧೋರಣೆ ಮಾಡಿದ್ದಾರೆ ಅಂತ ಬಿಜೆಪಿ ಟೀಕಿಸಿದೆ.
ಬಿಜೆಪಿ ಹೈಕಮಾಂಡ್ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಶಾಕ್ ಕೊಡೋ ತರ ಕಾಣ್ತಿದೆ. ಈ ಬಾರಿ ಲೋಕಸಭೆ ಎಲೆಕ್ಷನ್ಗೆ ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಬ್ ಸಿಂಹ ಬದಲು ರಾಜವಂಶಸ್ಥ ಯದುವೀರ್ ಒಡೆಯರ್ ಅವ್ರಿಗೆ ಟಿಕೆಟ್ ಕೊಡಲಿದೆ ಅನ್ನೋ ಸುದ್ಧಿ ಹರಿದಾಡ್ತಿದೆ. ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಂಸದ ಪ್ರತಾಪ್ ಸಿಂಹ, ನನ್ನ ಪಕ್ಷ ನನ್ನ ಕೈ ಬಿಡಲ್ಲ ಅನ್ನೋ ನಂಬಿಕೆ ಇದೆ. ನಾನು ಮತ್ತೆ ಗೆದ್ರೇ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ. ಹೀಗಿರೊವಾಗ ಕಾಂಗ್ರೆಸ್ಗೆ ನಮ್ಮ ಪಕ್ಷ ಯಾಕೆ ಹೆಲ್ಪ್ ಮಾಡುತ್ತೆ. ರಾಜಕೀಯದಲ್ಲಿ ದ್ವೇಶ ಅಸೂಹೆ ಇದ್ದೇ ಇರುತ್ತೆ ಅಂತೇಳಿದ್ದಾರೆ.
-masthmagaa.com
Contact Us for Advertisement