ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದ್ದ ಸಚಿನ್‌ ಪೈಲೆಟ್!‌ ಪಕ್ಷ ವಿರೋಧಿ ನಡೆ ಎಂದ ಕಾಂಗ್ರೆಸ್!

masthmagaa.com:

ತಮ್ಮದೇ ಸರ್ಕಾರದ ವಿರುದ್ಧ ಸಚಿನ್‌ ಪೈಲೆಟ್‌ ಉಪವಾಸ ಸತ್ಯಾಗ್ರಹ ನಡೆಸಿರೋದು ಪಕ್ಷ ವಿರೋಧಿಯಾಗಿದೆ ಅಂತ ರಾಜಸ್ಥಾನದ ಕಾಂಗ್ರೆಸ್‌ ಉಸ್ತುವಾರಿ ಸುಖಜಿಂದರ್‌ ಸಿಂಗ್‌ ರಾಂಧವಾ ಹೇಳಿದ್ದಾರೆ. ಬಿಜೆಪಿ ನಾಯಕಿ ಹಾಗೂ ಮಾಜಿ ಸಿಎಂ ವಸುಂಧರಾ ರಾಜೇ ವಿರುದ್ಧ ಮಾಡಲಾಗಿರೊ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಸಚಿನ್‌ ಪೈಲೆಟ್‌ ಘೋಷಿಸಿದ್ರು. ಇದಕ್ಕೆ ಪ್ರತಿಕ್ರಿಯಿಸರೊ ರಾಂಧವಾ, ಪೈಲೆಟ್‌ ಘೋಷಿಸಿರೊ ಉಪವಾಸ ಸತ್ಯಾಗ್ರಹ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply