BSY ಸಿಎಂ ಆಗಿ ಉಳಿತಾರಾ? ರಾಜ್ಯ ರಾಜಕಾರಣದಲ್ಲಿ ಕುತೂಹಲ!

masthmagaa.com:

ಕರ್ನಾಟಕ ಬಿಜೆಪಿಯಲ್ಲಿ ಕಳೆದ ಕೆಲ ದಿನಗಳಿಂದ ಬರೀ ನಾಯಕತ್ವ ಬದಲಾವಣೆಯದ್ದೆ ಚರ್ಚೆ. ಈ ನಡುವೆ ಮೊನ್ನೆ ಮೊನ್ನೆ ಕರ್ನಾಟಕಕ್ಕೆ ಬಂದು ಯಡಿಯೂರಪ್ಪನವರೇ ಸಿಎಂ.., ಏನೂ ಚೇಂಜ್ ಇಲ್ಲ ಅಂತ ಹೇಳಿ ದಿಲ್ಲಿಗೆ ಹಾರಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಳೆ, ಅಂದ್ರೆ ಜೂನ್ 17ಕ್ಕೆ ಮತ್ತೆ ಕರ್ನಾಟಕಕ್ಕೆ ಬರ್ತಾರೆ. ಎರಡು ದಿನ ರಾಜ್ಯದ ಎಲ್ಲ ಸಚಿವರು ಶಾಸಕರೊಂದಿಗೆ ಮಾತುಕತೆ ನಡೆಸ್ತಾರೆ. ಆ ಮೀಡಿಂಗ್ನಲ್ಲಿ ಎಲ್ಲರೂ ಯಡಿಯೂರಪ್ಪ ಬಗ್ಗೆ ತಮ್ಮ ಅಭಿಪ್ರಾಯವನ್ನ ಬಿಚ್ಚಿಡುತ್ತಾರೆ. ನಂತಯರ 18ನೇ ತಾರೀಕು ಕೋರ್ ಕಮಿಟಿ ಮೀಟಿಂಗ್ ಕೂಡ ನಡೆಯುತ್ತೆ ಅಂತ ಗೊತ್ತಾಗಿದೆ. ಇದೆಲ್ಲ ನೋಡ್ತಾ ಇದ್ರೆ ಬಿಜೆಪಿಯ ಒಳಗೆ ಏನೋ ಮಹತ್ವದ ಬೆಳವಣಿಗೆ ಆಗ್ತಿರೋದಂತೂ ಸತ್ಯ ಅನ್ನೋದು.

-masthmagaa.com

Contact Us for Advertisement

Leave a Reply