masthmagaa.com:
ಈ ಸಂಬಂಧ ಇವತ್ತು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಪ್ರಕರಣ ಸಂಬಂಧ ಎನ್ಐಎ ತನಿಖೆ ನಡೆಸಬೇಕು ಅಂತ ವಾದಿಸಿದ ಕೇಂದ್ರ ಸರ್ಕಾರ, ಈ ರೀತಿ ಪ್ರಧಾನಿಗೆ ಭದ್ರತಾ ವೈಫಲ್ಯ ಆಗಿರೋದು ಅಪರೂಪದಲ್ಲಿ ಅಪರೂಪ. ಈ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿರೋ ಪ್ರಕರಣ.. ಇದ್ರಿಂದ ಪ್ರಧಾನಿ ಮೋದಿ ಭದ್ರತೆಗೆ ಗಂಭೀರ ಮತ್ತು ಸವಾಲಿನ ಪರಿಸ್ಥಿತಿಯನ್ನು ಸೃಷ್ಟಿಯಾಗಿದೆ. ಇದಕ್ಕೆ ಪಂಜಾಬ್ ಸರ್ಕಾರ ಮತ್ತು ಪೊಲೀಸರನ್ನು ಹೊಣೆ ಮಾಡ್ಬೇಕು ಅಂತ ಹೇಳ್ತು. ಪ್ರತಿಯಾಗಿ ವಾದಿಸಿದ ಪಂಜಾಬ್ ಸರ್ಕಾರ, ನಾವು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೀವಿ. ಈಗಾಗಲೇ ತನಿಖೆಗೆ ಆದೇಶಿಸಿದ್ದೀವಿ. ಪ್ರಧಾನಿ ನಮಗೂ ಪ್ರಧಾನಿ ಅಂತ ಸಿಎಂ ಕೂಡ ಹೇಳಿದ್ದಾರೆ. ನಾವು ಎಲ್ಲಾ ರೀತಿಯ ತನಿಖೆಗೆ ಸಿದ್ಧ. ಕೋರ್ಟೇ ನಿರ್ಧರಿಸಲಿ ಅಂತ ಹೇಳ್ತು. ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ಪ್ರಧಾನಿ ಮೋದಿ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳು, ಈವರೆಗಿನ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಸುರಕ್ಷಿತವಾಗಿ ಇಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಿದೆ. ಪಂಜಾಬ್ ಪೊಲೀಸರು, ಎಸ್ಪಿಜಿ ರಿಜಿಸ್ಟ್ರಾರ್ ಜನರಲ್ಗೆ ಈ ಕಾರ್ಯದಲ್ಲಿ ಹೆಲ್ಪ್ ಮಾಡಿ ಅಂತ ಹೇಳಿದೆ. ಜೊತೆಗೆ ಪಂಜಾಬ್ ಮತ್ತು ಕೇಂದ್ರ ಸರ್ಕಾರದಿಂದ ಆದೇಶಿಸಲಾಗಿರೋ ತನಿಖೆಯನ್ನು ಸೋಮವಾರದವರೆಗೆ ಸ್ಥಗಿತಗೊಳಿಸುವಂತೆ ಕೂಡ ಆದೇಶಿಸಿದೆ.
-masthmagaa.com
Contact Us for Advertisement