ರಾಜ್ಯದಲ್ಲಿ ಮಳೆಯಬ್ಬರ ಜೋರು: ಎಲ್ಲೆಲ್ಲಿ ಮಳೆಯಾಯ್ತು..?

masthmagaa.com:

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಶುರುವಾಗಿರೋ ವರುಣನ ಹಾವಳಿ ಇವತ್ತೂ ಮುಂದುವರಿದಿದೆ. ಬೆಂಗಳೂರಲ್ಲಿ ನಿನ್ನೆಯಿಂದ ಶುರುವಾಗಿರೋ ಮಳೆ ಇವತ್ತೂ ಇಡೀ ದಿನ ಮುಂದುವರೀತು. ಒಂದಷ್ಟು ಭಾಗದಲ್ಲಿ ಜಿಟಿ ಜಿಟಿ ಮಳೆ ಬಂದ್ರೆ, ಒಂದಷ್ಟು ಭಾಗದಲ್ಲಿ ಮಳೆಯಬ್ಬರ ಜೋರಾಗಿತ್ತು. ರಸ್ತೆಗಳು ಮುಳುಗಡೆಯಾಗಿ, ಟ್ರಾಫಿಕ್ ಜಾಮ್​ನಿಂದ ಜನ ಪರದಾಡಿದ್ರು. ಆರ್​ಟಿ ನಗರ ಮತ್ತು ಟ್ರಿನಿಟಿ ಸರ್ಕಲ್​​​ನಲ್ಲಿ ಮರ ಉರುಳಿದೆ. ಅಪಾರ್ಟ್​​​ಮೆಂಟ್ ಮತ್ತು ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಜನ ಪರದಾಡಿದ್ರು. ಬಹುತೇಕ ಭಾಗದಲ್ಲಿ ಇಡೀ ದಿನ ಬಿಸಿಲು ಮಾಯವಾಗಿತ್ತು. ಇನ್ನು ರಾಜ್ಯದೆಲ್ಲೆಡೆ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಲವು ಅವಘಢಗಳು ಸಂಭವಿಸಿವೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಬೈಕ್​​ಗಳು ಕೊಚ್ಚಿ ಹೋಗಿವೆ. ಹಲವೆಡೆ ರೈತರ ಬೆಳೆ ನಾಶವಾಗಿ ಪರದಾಡುತ್ತಿದ್ದಾರೆ. ಇವತ್ತು ಬೆಂಗಳೂರು, ವಿಜಯನಗರ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾಳೆಯೂ ರಜೆ ಘೋಷಿಸಲಾಗಿದೆ. ಜೊತೆಗೆ ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡ್ಕೊಂಡು ಶಾಲೆಗಳಿಗೆ ರಜೆ ನೀಡೋ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕು ಅಂತ ಸಾರ್ವಜನಿಕ ಶಿಕ್ಷಣ ಇಲಾಕೆ ಸೂಚಿಸಿದೆ. ಇನ್ನು 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಲರ್ಟ್​ ಆಗಿರಿ ಅಂತ ಸೂಚಿಸಲಾಗಿದೆ. ಇವೆಲ್ಲದ್ರ ನಡುವೆ ರಾಜ್ಯದಲ್ಲಿ ಮತ್ತೂ ಮೂರು ದಿನ ಮಳೆಯಾಗಲಿದೆ. ನಂತರ 2 ದಿನ ಮೋಡ ಕವಿದ ವಾತಾವರಣ ಇರಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. 3 ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ. ಅಲ್ಲಲ್ಲಿ ಗುಡುಗು ಮಿಂಚಿನೊಂದಿಗೆ ಅಧಿಕ ಮಳೆಯಾಗೋ ಸಾಧ್ಯತೆ ಕೂಡ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿರಂತರ ಮಳೆಯಿಂದಾದ ಹಾನಿ ಕುರಿತು ಮಾಹಿತಿ ಕಲೆ ಹಾಕಬೇಕು. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಬೇಕು ಅಂತ ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರೋದ್ರಿಂದ ನಾವು ಸಮೀಕ್ಷೆಗೆ ಹೋಗಕ್ಕೆ ಆಗಲ್ಲ. ಹೀಗಾಗಿ ಶಾಸಕರು, ಸಚಿವರಿಲ್ಲದೇ ಅಧಿಕಾರಿಗಳ ತಂಡವೇ ಹೋಗಿ ಈ ಕೆಲಸ ಮಾಡ್ಬೇಕು ಅಂತ ಅಶೋಕ್ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply