ಉದ್ಧವ್​​​ಗೆ ಸೋನಿಯಾ ಪತ್ರ! ಒತ್ತಡವೇನೂ ಇಲ್ಲವೆಂದ ಶಿವಸೇನೆ

masthmagaa.com:

ಮಹಾರಾಷ್ಟ್ರ: ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಅಂತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ. ಡಿಸೆಂಬರ್ 14ರಂದು ಬರೆದಿರುವ ಈ ಪತ್ರದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡಬೇಕು. ಈ ಮೂಲಕ ಈ ವರ್ಗದಲ್ಲಿ ಉದ್ಯಮಶೀಲತೆಯನ್ನು ಬೆಳೆಸಬೇಕು.. ಅದೇ ರೀತಿ ಬಜೆಟ್​​ನಲ್ಲೂ ಈ ವರ್ಗದ ಜನರ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಬೇಕು ಅಂತ ಕೂಡ ತಿಳಿಸಿದ್ರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, ರಾಜ್ಯ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಯಾವುದೇ ಅಜೆಂಡಾ ಜೊತೆಗೆ ಬಂದರೂ ಕೂಡ ಅದನ್ನು ಸ್ವಾಗತಿಸುತ್ತೇವೆ. ಅದ್ರಲ್ಲಿ ಒತ್ತಡದ ರಾಜಕೀಯ ಏನೂ ಇಲ್ಲ ಅಂತ ಹೇಳಿದ್ದಾರೆ. ನಾವು ಸರ್ಕಾರ ರಚಿಸುವಾಗಲೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದೆವು. ಆದ್ರೆ ಕೊರೋನಾದಿಂದಾಗಿ ಅದರ ಕೆಲವೊಂದು ಕೆಲಸ ಬಾಕಿ ಉಳಿದುಕೊಂಡಿದ್ದವು. ಹೀಗಾಗಿ ಈ ಪತ್ರವನ್ನು ಬರೆದಿದ್ದಾರೆ ಅಂತ ಸ್ಪಷ್ಟನೆ ನೀಡಿದ್ದಾರೆ.

-masthmagaa.com

 

Contact Us for Advertisement

Leave a Reply