ಮೇಲೊಬ್ಬ ಮಾಯಾವಿ ಚಿತ್ರ, ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕರಾದ ಎಲ್.ಎನ್.ಶಾಸ್ತ್ರಿಯವರ ಕೊನೆಯ ಚಿತ್ರ. ಈ ಚಿತ್ರದಲ್ಲಿ ʻರಾಣಿಜೇನು ರೂಪಾನೆ ಚಂದʼ ಎಂಬ ಹಾಡನ್ನು ರಾಜೇಷ್ಕೃಷ್ಣನ್ ಮತ್ತು ಅನುರಾಧ ಭಟ್ ಅವರು ಹಾಡಿದ್ದಾರೆ. ಈ ವಿಡಿಯೋ ಸಾಂಗ್ ಈಗಾಗಲೇ ರಿಲೀಸ್ ಆಗಿದ್ದು ಚಕ್ರವರ್ತಿ ಚಂದ್ರಚೂಡ್ ಅವರ ಸಾಹಿತ್ಯ, ಎಲ್.ಎನ್ ಶಾಸ್ತ್ರಿಯವರ ಸಂಗೀತ, ನಾಯಕ ನಟ ನಾಯಕ ನಟಿಯ ಅಭಿನಯ ಮತ್ತು ರಾಜೇಶ್ ಕೃಷ್ಣನ್ ಅನುರಾಧ ಭಟ್ ಅವರ ಹಾಡುಗಾರಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಾಜೇಶ್ ಕೃಷ್ಣನ್ ಅವರು ಹಾಡು ಹಾಡುವ ಸಂದರ್ಭಕ್ಕೂ, ಈ ಸಂದರ್ಭಕ್ಕೂ ಸಾಕಷ್ಟು ಬದಲಾವಣೆಗಳೇ ಆಗಿ ಬಿಟ್ಟಿವೆ. ಮೇಲೊಬ್ಬ ಮಾಯಾವಿಯ ಆತ್ಮವಾಗಿದ್ದ ಸಂಚಾರಿ ವಿಜಯ್ ಅವ್ರು ದೈಹಿಕವಾಗಿ ನಮ್ಮನ್ನಗಲಿದ್ದಾರೆ.
ʻʻಮೇಲೊಬ್ಬ ಮಾಯಾವಿ ಚಿತ್ರದ ನಾನು ಹಾಡಿದ ಈ ಹಾಡು ಹಾಡುವಾಗ ಹೀಗಾಗುತ್ತೆ ಅಂದುಕೊಂಡಿರಲಿಲ್ಲ, ಆದರೀಗ ಚಿತ್ರದ ನಾಯಕ ಮತ್ತು ಸಂಗೀತ ನಿರ್ದೇಶಕ ಇಬ್ಬರು ಜೀವಂತವಾಗಿಲ್ಲ” ಎಂದು ಈ ಹಾಡಿನ ಬಗ್ಗೆ, ಎಲ್.ಎನ್.ಶಾಸ್ತ್ರಿಯವರ ಬಗ್ಗೆ ರಾಜೇಶ್ ಕೃಷ್ಣನ್ ತಮ್ಮ ಮನದಾಳದ ನೋವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.