ದಾದಾ ರಾಜಕೀಯ ಸೇರುವ ಗೊಂದಲಕ್ಕೆ ತೆರೆ! ಇನ್ನೇನ್‌ ಮಾಡ್ತಾರೆ ಸೌರವ್‌ ಗಂಗೂಲಿ?

masthmagaa.com:

ನಿನ್ನೆಯಷ್ಟೇ ಹೊಸ ಅಧ್ಯಾಯ ಆರಂಭಿಸ್ತೇನೆ ಅಂತ ಟ್ವೀಟ್‌ ಮಾಡೋ ಮೂಲಕ ದೇಶಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ ಗೌಂಗೂಲ್‌ ಈ ಬಗ್ಗೆ ಸ್ವತಃ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದಿನ ಜೀವನವನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ಮಾರ್ಗದರ್ಶಕರಾಗಿ ಆರಂಭಿಸಬೇಕು ಅಂತ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರೋ ದಾದಾ ಕ್ಲಾಸ್‌ ಆಪ್‌ ಅನ್ನೋ ಎಜುಕೇಶನಲ್‌ ಪ್ಲಾಟ್‌ಫಾಮ್‌ನ ರಾಯಭಾರಿಯಾಗಿ ಸೇವೆ ಸಲ್ಲಿಸೋದಾಗಿ ಹೇಳಿದ್ದು ರಾಜಕೀಯ ಸೇರುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

-masthmagaa.com

Contact Us for Advertisement

Leave a Reply