masthmagaa.com:
ಈ ತಾಲಿಬಾನಿಗಳ ಕೆಲವೊಂದು ಕೃತ್ಯಗಳನ್ನು ನೋಡಿದ್ರೆ ಇವರಿಗೇನಾದ್ರೂ ತಲೆಯಲ್ಲಿ ಲೂಸ್ ಕನೆಕ್ಷನ್ ಆಗಿದ್ಯಾ ಅಂತ ಅನಿಸುತ್ತೆ. ಯಾಕಂದ್ರೆ 2001ರಲ್ಲಿ ತಾವೇ ನಾಶ ಮಾಡಿದ್ದ ಬಮಿಯನ್ ಬುದ್ಧನ ಪ್ರತಿಮೆಯ ಅವಶೇಷಗಳ ರಕ್ಷಣೆಗೆ ಮುಂದಾಗಿದ್ದಾರೆ. 1500 ವರ್ಷಗಳಷ್ಟು ಹಳೆಯ ಈ ಪ್ರತಿಮೆಯನ್ನು ನೂರಾರು ತಾಲಿಬಾನಿಗಳು ಸೇರಿಕೊಂಡು, ಮೂರು ವಾರಗಳ ಕಾಲ ನಿರಂತರ ಶ್ರಮವಹಿಸಿ ಧ್ವಂಸಗೊಳಿಸಿದ್ರು. ಡೈನಾಮೇಟ್ ಇಟ್ಟು ಉಡಾಯಿಸಿದ್ರು. ಆದ್ರೆ ಈಗ ಅಲ್ಲಿ ಬುದ್ಧನ ಪ್ರತಿಮೆ ಬದಲು ಬರೀ ಅವಶೇಷಗಳಿವೆ.. ಈಗ ಪ್ರಧಾನಿಯಾಗಿರೋ ಮೊಹ್ಮದ್ ಹಸನ್ ಅಖುಂಡ್ ದೇಶದ ಎಲ್ಲಾ ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ ಈ ಹಿಂದೆ ತಾಲಿಬಾನಿಗಳು ಅಧಿಕಾರದಲ್ಲಿದ್ದಾಗ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಉಮರ್ ಆದೇಶದ ಮೇರೆಗೆ ಈ ಪ್ರತಿಮೆಯನ್ನು ಧ್ವಂಸ ಮಾಡಿದ್ದು ಬೇರೆ ಯಾರೂ ಅಲ್ಲ.. ಇದೇ ಮೊಹ್ಮದ್ ಹಸನ್ ಅಖುಂಡ್ ಮುಂದಾಳಾಗಿ ಹೋಗಿ ಪ್ರತಿಮೆ ಧ್ವಂಸಗೊಳಿಸಿದ್ರು. ಈಗ ಅವರೇ ಅವುಗಳ ರಕ್ಷಣೆಗೆ ಆದೇಶಿಸಿದ್ದಾರೆ. ಪ್ರವಾಸಿಗರು ಕೂಡ ಸ್ಥಳಕ್ಕೆ ಭೇಟಿ ನೀಡಬಹುದು ಅಂತ ತಾಲಿಬಾನ್ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಮಿಯನ್ ಪ್ರಾಂತ್ಯದ ಹೊಸ ಸಾಂಸ್ಕೃತಿಕ ವ್ಯವಹಾರಗಳ ಕಚೇರಿ ಅಧಿಕಾರಿ ಮೊಹಮ್ಮದಿ, ಬುದ್ಧನ ಪ್ರತಿಮೆ ಧ್ವಂಸದ ವೇಳೆ ನಾನಿನ್ನೂ ಯುವಕನಾಗಿದ್ದೆ. ಅದ್ರ ಬಗ್ಗೆ ಕಮೆಂಟ್ ಮಾಡೋಕೆ ಆಗಲ್ಲ. ಇಸ್ಲಾಮಿಕ್ ಎಮಿರೇಟ್ ಕಾರಣ ಇದ್ದಿದ್ರಿಂದಲೇ ಆ ನಿರ್ಧಾರ ತೆಗೆದುಕೊಂಡಿರಬಹುದು ಅಂತ ಹೇಳಿದ್ದಾರೆ. ಆದ್ರೆ ಈಗ ದೇಶದ ಐತಿಹಾಸಿಕ ಪರಂಪರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೀವಿ ಅಂತ ಕೂಡ ತಿಳಿಸಿದ್ದಾರೆ.
-masthmagaa.com
Contact Us for Advertisement