masthmagaa.com:
ದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಕೊರೋನಾ ಹಾವಳಿ ಇಡಲಿದೆ ಅಂತ ತಜ್ಞರು ಎಚ್ಚರಿಸಿದ್ದಾರೆ. ಗೃಹ ಸಚಿವಾಲಯದಿಂದ ರಚಿಸಲ್ಪಟ್ಟಿದ್ದ ಈ ಸಮಿತಿ ಪ್ರಧಾನಿ ಮೋದಿಗೆ ವರದಿ ಸಲ್ಲಿಸಿದೆ. ಇದ್ರಲ್ಲಿ ಮೂರನೇ ಅಲೆಯಲ್ಲಿ ವಯಸ್ಕರಿಗಿಂತಲೂ ಮಕ್ಕಳಿಗೆ ಅಪಾಯ ಜಾಸ್ತಿ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲವೆಂದಿರೋ ಸಂಸ್ಥೆ, ಮಕ್ಕಳು ಎಲ್ಲಿಯವರೆಗೆ ಲಸಿಕೆ ಹಾಕಿಸಿಕೊಳ್ಳೋದಿಲ್ಲವೋ ಅಲ್ಲಿಯವರೆಗೆ ಅಪಾಯವನ್ನು ನಿರ್ಲಕ್ಷ್ಯ ಮಾಡುವಂತೆ ಇಲ್ಲ. ಅದೇ ರೀತಿ ಮಕ್ಕಳಿಗೆ ಸಂಬಂಧಿಸಿದಂತೆ ಈಗಿರೋ ವೈದ್ಯಕೀಯ ಸೌಲಭ್ಯಗಳು ಕೂಡ ಅಸಪರ್ಮಕವಾಗಿವೆ ಅಂತ ಹೇಳಿದೆ.
-masthmagaa.com
Contact Us for Advertisement