ಭಾರತ ಈಗ ಮೊದಲಿನ ರೀತಿಯಿಲ್ಲ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡುತ್ತೆ: ಜೈಶಂಕರ್‌

masthmagaa.com:

ಭಾರತ ಈಗ ಮೊದಲಿನ ರೀತಿಯಲ್ಲಿ ಇಲ್ಲ. ತನ್ನ ರಾಷ್ಟ್ರೀಯ ಭದ್ರತೆಗಾಗಿ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿರುವ ಹೊಸ ಭಾರತವನ್ನ ಜಗತ್ತು ನೋಡ್ತಿದೆ ಅಂತ ಕೇಂದ್ರ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ಉಗಾಂಡ ಪ್ರವಾಸದಲ್ಲಿರುವ ಜೈಶಂಕರ್‌, ಅಲ್ಲಿರುವ ಭಾರತೀಯರನ್ನ ಉದ್ದೇಶಿಸಿ ಮಾತಾಡುವಾಗ ಈ ರೀತಿ ಹೇಳಿದ್ದಾರೆ. ದಶಕಗಳಿಂದ ಸಹಿಸಿಕೊಂಡು ಬಂದಿದ್ದ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿರುವವರಿಗೆ ಭಾರತ ಬದಲಾಗಿದೆ ಹಾಗೂ ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡುತ್ತೆ ಅನ್ನೋದು ತಿಳಿದಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನ ಕುರಿತ ಮಾತಾಡಿರುವ ಜೈಶಂಕರ್‌, ಕಳೆದ ಮೂರು ವರ್ಷಗಳಿಂದ ಒಪ್ಪಂದಗಳನ್ನ ಉಲ್ಲಂಘಿಸಿರುವ ಚೀನಾ, ಅತಿಹೆಚ್ಚು ಸೇನಾಪಡೆಯನ್ನ ನಿಯೋಜಿಸಿದೆ. ಈ ಕಠಿಣ ಸಂದರ್ಭದಲ್ಲಿ ಭಾರತ ಕೂಡ ಸೇನೆಯನ್ನ ನಿಯೋಜಿಸಿದೆ. ಅಷ್ಟೆ ಅಲ್ದೆ ಭಾರತದ ನೀತಿ ನಿಯಮಗಳು ಹೊರಗಿನ ಒತ್ತಡದಿಂದ ಪ್ರಭಾವಿತವಾಗಿಲ್ಲ. ಭಾರತ ಅತ್ಯಂತ ಸ್ವತಂತ್ರ ರಾಷ್ಟ್ರವಾಗಿದೆ ಅಂತ ಜೈಶಂಕರ್‌ ಚೀನಾಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply