masthmagaa.com:
ಇತ್ತೀಚೆಗೆ ಒಂದು ವಿಡಿಯೋ ತುಂಬಾ ವೈರಲ್ ಆಗಿತ್ತು. ಉತ್ತರ ಪ್ರದೇಶದಲ್ಲಿ ಓರ್ವ ವಯಸ್ಸಾದ ವ್ಯಕ್ತಿಯನ್ನು ಕಾಡಿಗೆ ಎಳೆದೊಯ್ದು, ಗಡ್ಡ ಬೋಳಿಸಿ, ವಂದೇ ಮಾತರಂ ಅಂತ ಕೂಗಿಸಿದ್ದಾರೆ. ಈ ವಿಡಿಯೋದ ಅಸಲಿಯತ್ತು ಈಗ ಬಯಲಿಗೆ ಬಂದಿದೆ. ವಿಡಿಯೋದಲ್ಲಿರೋ ಅಬ್ದುಲ್ ಸಮಾದ್ ಎಂಬ ವೃದ್ಧ ಗ್ರಾಮದ ಜನರಿಗೆ ತಾಯತಗಳನ್ನು ಮಾಡಿಕೊಡುತ್ತಿದ್ದ. ಇದೇ ವಿಚಾರವಾಗಿ ಗ್ರಾಮದ ಕೆಲ ಯುವಕರು ಮತ್ತು ಇವರ ನಡುವೆ ಮನಸ್ಥಾಪ ಬಂದಿತ್ತು. ಅದರಂತೆ ವೃದ್ಧನನ್ನು ಅಡ್ಡಗಟ್ಟಿದ್ದ ಯುವಕರು ಈ ಕೃತ್ಯ ಎಸಗಿದ್ದಾರೆ. ಮೂವರು ಆರೋಪಿಗಳನ್ನು ಈಗಾಗಲೇ ಅರೆಸ್ಟ್ ಕೂಡ ಮಾಡಲಾಗಿದೆ. ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರಲ್ಲ ಅಂತ ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ಧಾರೆ. ಆದ್ರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಬಳಿಕ ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ರು. ಹೀಗಾಗಿ ಪೊಲೀಸರು ಕೆಲ ರಾಜಕೀಯ ನಾಯಕರು ಮತ್ತು ಟ್ವಿಟ್ಟರ್ ಸಂಸ್ಥೆಗೆ ವಿಡಿಯೋ ಮತ್ತು ಕೋಮುಗಲಭೆಗೆ ಪ್ರಚೋದನೆ ನೀಡುವ ಕೆಲ ಕಂಟೆಂಟ್ಗಳನ್ನು ತೆಗೆಯುವಂತೆ ಮನವಿ ಮಾಡಿದ್ರು. ಆದ್ರೂ ಟ್ವಿಟ್ಟರ್ ಬಳಕೆದಾರರು ಪೋಸ್ಟ್ ಡಿಲೀಟ್ ಮಾಡಿಲ್ಲ. ಅಲ್ಲದೆ ಟ್ವಿಟ್ಟರ್ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸದ್ಯ ಟ್ವಿಟ್ಟರ್, ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಟ್ವಿಟ್ಟರ್ ಸಂಸ್ಥೆ ಡಿಜಿಟಲ್ ರೂಲ್ಸ್ ಫಾಲೋ ಮಾಡದ ಕಾರಣ ಅದಕ್ಕಿದ್ದ ಲೀಗಲ್ ಪ್ರೊಟೆಕ್ಷನ್ನ್ನು ವಾಪಸ್ ಪಡೆಯಲಾಗಿತ್ತು. ಇದ್ರ ಲಾಭ ಪಡೆದುಕೊಂಡ ಉತ್ತರ ಪ್ರದೇಶ ಸರ್ಕಾರ ಟ್ವಿಟ್ಟರ್ ಮೇಲೆ ದೇಶದಲ್ಲೇ ಮೊದಲ ಬಾರಿಗೆ ಎಫ್ಐಆರ್ ದಾಖಲಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಬ್ದುಲ್ ಸಮಾದ್ ಕುಟುಂಬಸ್ಥರು, ಪೊಲೀಸರು ತಾಯತ ಮಾರ್ತಿದ್ರು ಅಂತ ಸುಳ್ಳು ಹೇಳ್ತಿದ್ದಾರೆ ಎಂದಿದ್ದಾರೆ.
-masthmagaa.com
Contact Us for Advertisement