masthmagaa.com:
ಇವತ್ತಿಂದ ಅರ್ಧ ರಾಜ್ಯದಲ್ಲಿ ಅನ್ಲಾಕ್ ಶುರುವಾಗಿದೆ. ಬಸ್, ವಾಹನಗಳ ಓಡಾಟ ತುಂಬಾ ಜೋರಾಗೇ ಇತ್ತು. ಮಾರ್ಕೆಟ್ಗಳಲ್ಲೂ ಜನ ತುಂಬಾ ಆರಾಮಾಗಿ ಓಡಾಡ್ಕೊಂಡು, ಏನೇನ್ ಬೇಕೋ ಎಲ್ಲಾ ತಗೊಂಡು ಮನೆಗೆ ಹೋಗಿದ್ದು ಕಂಡು ಬಂತು.. ಇನ್ನು ಇದ್ರ ನಡುವೆ ಲಾಕ್ಡೌನ್ ಸಡಿಲಿಕೆಯಾಗಿರೋ ಜಿಲ್ಲೆಗಳ ಪಟ್ಟಿಗೆ ಮತ್ತೂ 6 ಜಿಲ್ಲೆಗಳನ್ನು ಆಡ್ ಮಾಡಿ ಹೊಸ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ. ಉಡುಪಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. 5 ಪರ್ಸೆಂಟ್ಗಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಏನೆಲ್ಲಾ ರಿಯಾಯಿತಿ ನೀಡಲಾಗಿತ್ತೋ, ಆ ಎಲ್ಲಾ ರಿಯಾಯಿತಿಗಳನ್ನು ಈ ಜಿಲ್ಲೆಗಳಿಗೂ ನೀಡಲಾಗಿದೆ. ಅಂದ್ರೆ ಇನ್ಮುಂದೆ ಈ ಜಿಲ್ಲೆಗಳಲ್ಲೂ ಸಂಜೆ 5 ಗಂಟೆವರೆಗೆ ಎಲ್ಲಾ ಅಂಗಡಿಗಳು ಓಪನ್ ಇರಲು, ಬಸ್, ಜಿಮ್ಗಳು 50 ಪರ್ಸೆಂಟ್ ಜನರೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ.. ಅದೇ ರೀತಿ ಹೋಟೆಲ್ಗಳಲ್ಲೇ ಊಟ ಮಾಡೋಕೂ ಅವಕಾಶ ನೀಡಲಾಗಿದೆ.
-masthmagaa.com
Contact Us for Advertisement