ಮತ್ತೂ 6 ರಾಜ್ಯಗಳಿಗೆ ರಿಲೀಫ್ ಕೊಟ್ಟ ರಾಜ್ಯ ಸರ್ಕಾರ!

masthmagaa.com:

ಇವತ್ತಿಂದ ಅರ್ಧ ರಾಜ್ಯದಲ್ಲಿ ಅನ್​ಲಾಕ್​​​ ಶುರುವಾಗಿದೆ. ಬಸ್, ವಾಹನಗಳ ಓಡಾಟ ತುಂಬಾ ಜೋರಾಗೇ ಇತ್ತು. ಮಾರ್ಕೆಟ್​​ಗಳಲ್ಲೂ ಜನ ತುಂಬಾ ಆರಾಮಾಗಿ ಓಡಾಡ್ಕೊಂಡು, ಏನೇನ್ ಬೇಕೋ ಎಲ್ಲಾ ತಗೊಂಡು ಮನೆಗೆ ಹೋಗಿದ್ದು ಕಂಡು ಬಂತು.. ಇನ್ನು ಇದ್ರ ನಡುವೆ ಲಾಕ್​ಡೌನ್ ಸಡಿಲಿಕೆಯಾಗಿರೋ ಜಿಲ್ಲೆಗಳ ಪಟ್ಟಿಗೆ ಮತ್ತೂ 6 ಜಿಲ್ಲೆಗಳನ್ನು ಆಡ್ ಮಾಡಿ ಹೊಸ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ. ಉಡುಪಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. 5 ಪರ್ಸೆಂಟ್​ಗಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಏನೆಲ್ಲಾ ರಿಯಾಯಿತಿ ನೀಡಲಾಗಿತ್ತೋ, ಆ ಎಲ್ಲಾ ರಿಯಾಯಿತಿಗಳನ್ನು ಈ ಜಿಲ್ಲೆಗಳಿಗೂ ನೀಡಲಾಗಿದೆ. ಅಂದ್ರೆ ಇನ್ಮುಂದೆ ಈ ಜಿಲ್ಲೆಗಳಲ್ಲೂ ಸಂಜೆ 5 ಗಂಟೆವರೆಗೆ ಎಲ್ಲಾ ಅಂಗಡಿಗಳು ಓಪನ್ ಇರಲು, ಬಸ್, ಜಿಮ್​​ಗಳು 50 ಪರ್ಸೆಂಟ್ ಜನರೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ.. ಅದೇ ರೀತಿ ಹೋಟೆಲ್​​ಗಳಲ್ಲೇ ಊಟ ಮಾಡೋಕೂ ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply