masthmagaa.com:
ಮುಸ್ಲಿಂ ಏರಿಯಾ ಅನ್ನೋ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರೋ ಮಾತು ಇದೀಗ ವಿವಾದ ಸ್ವರೂಪ ಪಡೆದಿದ್ದು ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ʻಮುಸ್ಲಿಮ್ ಏರಿಯಾ ಎಂದರೆ ಅದೇನು ಪಾಕಿಸ್ತಾನಕ್ಕೆ ಸೇರಿದ್ದಾ? ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಅಂಥವರ ಫೋಟೊ ಹಾಕಲು ಇವರನ್ಯಾಕೆ ಕೇಳಬೇಕು ಅಂತ ಕಿಡಿಕಾರಿದ್ರು. ಶಾಸಕ ರೇಣುಕಾಚಾರ್ಯ ಮಾತನಾಡಿ ʻಇವರಿಗೆ ತಾಕತ್ತು ಇದ್ದರೆ ನಾನೊಬ್ಬ ಹಿಂದೂ ಎಂದು ಘೋಷಿಸಲಿ. ಮೊದಲು ವೋಟ್ ಬ್ಯಾಂಕ್ ರಾಜಕಾರಣ ಬಿಡಲಿ.ಸರ್ಕಾರದ ಸಾಧನೆ ಜನರಿಗೆ ತಲುಪಬಾರ್ದು ಅಂತ ಅಪಪ್ರಚಾರ ಮಾಡುತ್ತಿದ್ದಾರೆ.. ಹರ್ಷ, ಪ್ರವೀಣ್ ಹತ್ಯೆಗೆ ನಿಮ್ಮ ಕುಮ್ಮಕ್ಕೇ ಕಾರಣ. ರಾಜ್ಯದ ಜನರ ಹತ್ರ ಕ್ಷಮೆ ಕೇಳಿ ಅಂತ ಆಗ್ರಹ ಮಾಡಿದ್ದಾರೆ. ಇನ್ನು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಂತೂ ಸಿದ್ದರಾಮಯ್ಯ ರಾಷ್ಟ್ರದ್ರೋಹಿಗಳ ಪರವಾಗಿ ಇದ್ದಾರೆ. ಸಿದ್ದರಾಮಯ್ಯ ಕೊಟ್ಟಿರೋದು ರಾಷ್ಟ್ರದ್ರೋಹಿ ಹೇಳಿಕೆ. ದೇಶದಲ್ಲಿ ಮುಸಲ್ಮಾನ ಭೂಮಿ ಅಂತ ಎಲ್ಲೂ ಇಲ್ಲ. ಸಿದ್ದರಾಮಯ್ಯ ಕ್ರಿಯೇಟ್ ಮಾಡ್ತಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿಗೆ ದೂರು ಕೊಟ್ಟು ಪಕ್ಷದಿಂದ ಉಚ್ಚಾಟನೆ ಮಾಡೋಕೆ ಒತ್ತಾಯ ಮಾಡ್ತೇನೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಇದು ಜಿಹಾದಿ ಮನಸ್ಥಿತಿಗಿಂತ ಡೇಂಜರ್. ಸಾವರ್ಕರ್-ಟಿಪ್ಪು ವಿಚಾರವಾಗಿ ಬಹಿರಂಗ ಚರ್ಚೆ ಮಾಡೋಣ ಬನ್ನಿ ಅಂತ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಸಿದ್ದರಾಮಯ್ಯಗೆ ಸವಾಲೆಸಿದ್ದಾರೆ. ಇತ್ತ ಸಿದ್ದರಾಮಯ್ಯರ ಮಾಜಿ ಶಿಷ್ಯ ಡಾ ಕೆ ಸುಧಾಕರ್ ಪ್ರತಿಕ್ರಿಯಿಸಿ ಇದನ್ನ ಪಾಕಿಸ್ತಾನದಲ್ಲಿ ಹೇಳಿದ್ರೆ ಅರ್ಥ ಸಿಗ್ತಿತ್ತು. ಮಾಜಿ ಸಿಎಂ ಆಗಿ ಇಂತಹ ಹೇಳಿಕೆ ನೀಡಿರೋದು ದುರಾದೃಷ್ಟ ಅಂತ ಹೇಳಿದ್ರು.
-masthmagaa.com
Contact Us for Advertisement