masthmagaa.com:
ಕನ್ನಡ ಹಿಂದಿ ಅಂತ ಭಾಷೆ ಭರಾಟೆ ನಡೆಯುತ್ತಿರುವಾಗಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಒಂದೊಳ್ಳೆ ಮಾತಾಡಿದ್ದಾರೆ. ದೆಹಲಿಯಲ್ಲಿ ಮಾತಾಡಿದ ಅವರು, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲೇ ಸಿಗಬೇಕು. ಯಾಕಂದ್ರೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದ್ರೆ ಮಕ್ಕಳು ಚೆನ್ನಾಗಿ ಗ್ರಹಿಸಿಕೊಳ್ತಾರೆ..ಹೀಗಾಗಿ ಮೊದಲು ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ ಆಮೇಲೆ ಬೇಕಾದ್ರೆ ಬೇರೆ ಭಾಷೆ ಶಿಕ್ಷಣ ಕೊಡಿಸಬೇಕ ಅಂತ ಹೇಳಿದ್ದಾರೆ.. ಭಾರತೀಯ ಶಿಕ್ಷಣ ವ್ಯವಸ್ಥೆ ನಮ್ಮ ನಮ್ಮ ಸಂಸ್ಕೃತಿಗೆ ಅನುಗುಣವಾಗಿರಬೇಕು ಅಂತಲೂ ಹೇಳಿದ್ದಾರೆ.
-masthmagaa.com
Contact Us for Advertisement