masthmagaa.com:
ಉತ್ತರಾಖಂಡ್ನ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮ ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದ್ರಲ್ಲಿ ಕೆಲ ಧಾರ್ಮಿಕ ನಾಯಕರು ಮಾತನಾಡಿ, ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಕರೆ ನೀಡಿದ್ದಾರೆ. ಹಿಂದೂ ರಕ್ಷಾ ಸೇನೆಯ ನಾಯಕ ಪ್ರಬೋದಾನಂದ್ ಗಿರಿ ಮಾತನಾಡಿ, ಈಗ ಬೇರೆ ದಾರಿಯಿಲ್ಲ. ಪೊಲೀಸರು, ಸೈನಿಕರು, ನಾಯಕರು ಮತ್ತು ಪ್ರತಿಯೊಬ್ಬ ಹಿಂದೂ ಶಸ್ತ್ರಾಸ್ತ್ರ ಹಿಡಿದು ಈ ಸ್ವಚ್ಛತಾ ಅಭಿಯಾನ ನಡೆಸಬೇಕು ಅಂತ ಅಂತ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ವಿಭಾಗದ ನಾಯಕಿ ಉದಿತಾ ತ್ಯಾಗಿ ಮತ್ತು ಈಗಾಗಲೇ ದೆಹಲಿಯಲ್ಲಿ ದ್ವೇಷ ಭಾಷಣ ಮಾಡಿ ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗಿರೋ ಅಶ್ವಿನಿ ಉಪಾದ್ಯಾಯ ಕೂಡ ಭಾಗಿಯಾಗಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಬೋದಾನಂದ್ ಗಿರಿ, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧವಾಗಿದ್ದೀನಿ. ನಾನು ಪೊಲೀಸರಿಗೆ ಹೆದರೋದಿಲ್ಲ ಅಂತ ಹೇಳಿದ್ದಾರೆ. ಈ ಕಾರ್ಯಕ್ರಮ ನಡೆದು ಮೂರ್ನಾಲ್ಕು ದಿನಗಳಾದ್ರೂ ಪೊಲೀಸರು ಯಾರನ್ನೂ ಅರೆಸ್ಟ್ ಮಾಡಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ದ್ವೇಷ ಭಾಷಣಕಾರರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬರ್ತಿದೆ.
-masthmagaa.com
Contact Us for Advertisement