masthmagaa.com:
ದೆಹಲಿಯಲ್ಲಿ ನಿನ್ನೆ ರಾತ್ರಿಯೂ ಮಳೆಯಬ್ಬರ ಮುಂದುವರಿತ್ತು. ರಸ್ತೆ, ವಿಮಾನ ನಿಲ್ದಾಣಗಳಲ್ಲಿ ನೀರು ತುಂಬಿಕೊಂಡಿತ್ತು. ಇದ್ರ ನಡುವೆ ಇದ್ರಲ್ಲೂ ರಾಜಕೀಯದ ಕೊಂಕಾಟ ಶುರುವಾಗಿದೆ. ಬಿಜೆಪಿ ನಾಯಕ ತಜಿಂದರ್ ಬಗ್ಗಾ ರಸ್ತೆಯಲ್ಲಿ ದೋಣಿಯಲ್ಲಿ ಪ್ರಯಾಣ ಮಾಡಿದ್ದಾರೆ. ವಿಡಿಯೋದಲ್ಲಿ ಮಾತಾಡಿರೋ ಅವರು, ನಾನು ಋಷಿಕೇಶ್ಗೆ ರಾಫ್ಟಿಂಗ್ಗೆ ಹೋಗ್ಬೇಕು ಅಂತ ಭಾರಿ ಆಸೆ ಇತ್ತು. ಆದ್ರೆ ಆಗ್ಲಿಲ್ಲ. ಆದ್ರೆ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯ ಮೂಲೆ ಮೂಲೆಯಲ್ಲೂ ರಾಫ್ಟಿಂಗ್ಗೆ ವ್ಯವಸ್ಥೆ ಮಾಡಿದ್ದಾರೆ. ಅದಕ್ಕೆ ಧನ್ಯವಾದ ಅಂದಿದ್ದಾರೆ. ಮತ್ತೊಂದ್ಕಡೆ ದೆಹಲಿ ಗಡಿಭಾಗದಲ್ಲಿರೋ ಉತ್ತರ ಪ್ರದೇಶದ ಘಾಜಿಪುರ್ನಲ್ಲಿ ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್ ನೀರಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
-masthmagaa.com
Contact Us for Advertisement