ಆತ್ಮಹತ್ಯೆ ಹಿಂದಿರೋ ಆ ಮಹಾನಾಯಕ ಯಾರು?

masthmagaa.com:

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಸಾವಿನ ಹಿಂದೆ ಮಹಾ ನಾಯಕನ ಕೈವಾಡ ಇದೆ ಅಂತ ಮಾಜಿ ಸಚಿವ ಮತ್ತು​ ಬಿಜೆಪಿ ನಾಯಕ ರಮೇಶ್​ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಮೃತ ಸಂತೋಷ್​​ ಮನೆಗೆ ಭೇಟಿ ನೀಡಿ ಮಾತನಾಡಿದ ರಮೇಶ್​ ಜಾರಕಿಹೊಳಿ, ನನ್ನ ಸಿಡಿ ಕೇಸ್​ ಷಡ್ಯಂತ್ರದಲ್ಲಿ ಭಾಗಿಯಾಗಿದ್ದ ಮಹಾ ನಾಯಕನ ಸೇಮ್​ ತಂಡ ಸಂತೋಷ್​ ಆತ್ಮಹತ್ಯೆ ಹಿಂದೆನೂ ಇದೆ. ನಾನು ಯಾರ ಹೆಸರನ್ನೂ ಹೇಳಲ್ಲ. ಹೈಕಮಾಂಡ್​ ಪರ್ಮಿಷನ್​ ಪಡ್ಕೊಂಡು ಸೋಮವಾರ ಬೆಳಗ್ಗೆ ಎಲ್ಲವನ್ನ ಖುಲಾಸೆ ಮಾಡ್ತೀನಿ ಎಂದಿದ್ದಾರೆ. ಜೊತೆಗೆ ಮೊನ್ನೆಯಷ್ಟೇ ಸಂತೋಷ್​​ ನಮ್ಮ ಆಪ್ತರಿಗೆ ಕಾಲ್​ ಮಾಡಿ ಮಾತನಾಡಿದ್ದಾನೆ. ಅಂಥವನು ಯಾಕೆ ಸಾಯ್ತಾನೆ? ಹೀಗಾಗಿ ಈ ಕೇಸ್​ ಮತ್ತು ಸಿಡಿ ಕೇಸ್​ – ಎರಡನ್ನೂ ಸಿಬಿಐಗೆ ಕೊಡ್ಬೇಕು ಅಂತ ರಮೇಶ್​ ಜಾರಕಿಹೊಳಿ ಆಗ್ರಹಿಸಿದ್ದಾರೆ. ಇಲ್ಲಿ ಮಹಾ ನಾಯಕ ಯಾರು ಅನ್ನೋದೇ ಪ್ರಶ್ನೆ. ರಮೇಶ್​ ಜಾರಕಿಹೊಳಿ ಈ ಹಿಂದೆ ತಮ್ಮ ಸಿಡಿ ಕೇಸ್​​ನಲ್ಲಿ ಪದೇಪದೆ ಮಹಾ ನಾಯಕ, ಮಹಾ ನಾಯಕ ಅನ್ನೋ ಪದವನ್ನ ಬಳಸಿದ್ರು. ಒಂದ್ಸಲ ಡಿಕೆ ಶಿವಕುಮಾರ್​ ಹೆಸರನ್ನ ಕೂಡ ಉಲ್ಲೇಖಿಸಿದ್ರು. ಸೋ ರಮೇಶ್​ ಜಾರಕಿಹೊಳಿ ಹೇಳ್ತಿರೋ ಮಹಾ ನಾಯಕ ಡಿಕೆ ಶಿವಕುಮಾರ್​​ ಅವರಾ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬೊಮ್ಮಾಯಿ, ರಮೇಶ್​ ಜಾರಕಿಹೊಳಿ ಯಾರನ್ನ ಮಹಾ ನಾಯಕ ಅಂದಿದ್ದಾರೆ ನಂಗೆ ಗೊತ್ತಿಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply