masthmagaa.com:
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಹಿಂದೆ ಮಹಾ ನಾಯಕನ ಕೈವಾಡ ಇದೆ ಅಂತ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಮೃತ ಸಂತೋಷ್ ಮನೆಗೆ ಭೇಟಿ ನೀಡಿ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಸಿಡಿ ಕೇಸ್ ಷಡ್ಯಂತ್ರದಲ್ಲಿ ಭಾಗಿಯಾಗಿದ್ದ ಮಹಾ ನಾಯಕನ ಸೇಮ್ ತಂಡ ಸಂತೋಷ್ ಆತ್ಮಹತ್ಯೆ ಹಿಂದೆನೂ ಇದೆ. ನಾನು ಯಾರ ಹೆಸರನ್ನೂ ಹೇಳಲ್ಲ. ಹೈಕಮಾಂಡ್ ಪರ್ಮಿಷನ್ ಪಡ್ಕೊಂಡು ಸೋಮವಾರ ಬೆಳಗ್ಗೆ ಎಲ್ಲವನ್ನ ಖುಲಾಸೆ ಮಾಡ್ತೀನಿ ಎಂದಿದ್ದಾರೆ. ಜೊತೆಗೆ ಮೊನ್ನೆಯಷ್ಟೇ ಸಂತೋಷ್ ನಮ್ಮ ಆಪ್ತರಿಗೆ ಕಾಲ್ ಮಾಡಿ ಮಾತನಾಡಿದ್ದಾನೆ. ಅಂಥವನು ಯಾಕೆ ಸಾಯ್ತಾನೆ? ಹೀಗಾಗಿ ಈ ಕೇಸ್ ಮತ್ತು ಸಿಡಿ ಕೇಸ್ – ಎರಡನ್ನೂ ಸಿಬಿಐಗೆ ಕೊಡ್ಬೇಕು ಅಂತ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ಇಲ್ಲಿ ಮಹಾ ನಾಯಕ ಯಾರು ಅನ್ನೋದೇ ಪ್ರಶ್ನೆ. ರಮೇಶ್ ಜಾರಕಿಹೊಳಿ ಈ ಹಿಂದೆ ತಮ್ಮ ಸಿಡಿ ಕೇಸ್ನಲ್ಲಿ ಪದೇಪದೆ ಮಹಾ ನಾಯಕ, ಮಹಾ ನಾಯಕ ಅನ್ನೋ ಪದವನ್ನ ಬಳಸಿದ್ರು. ಒಂದ್ಸಲ ಡಿಕೆ ಶಿವಕುಮಾರ್ ಹೆಸರನ್ನ ಕೂಡ ಉಲ್ಲೇಖಿಸಿದ್ರು. ಸೋ ರಮೇಶ್ ಜಾರಕಿಹೊಳಿ ಹೇಳ್ತಿರೋ ಮಹಾ ನಾಯಕ ಡಿಕೆ ಶಿವಕುಮಾರ್ ಅವರಾ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಯಾರನ್ನ ಮಹಾ ನಾಯಕ ಅಂದಿದ್ದಾರೆ ನಂಗೆ ಗೊತ್ತಿಲ್ಲ ಎಂದಿದ್ದಾರೆ.
-masthmagaa.com
Contact Us for Advertisement