masthmagaa.com:
ದೇಶದ್ರೋಹ ಕಾನೂನು ವಸಾಹತುಶಾಹಿ ಕಾಲದ ಕಾನೂನು.. ಈಗಲೂ ಆ ಕಾನೂನು ಅಗತ್ಯವಿದೆಯಾ ಅಂತ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನಿವೃತ್ತ ಮೇಜರ್ ಜನರಲ್ ಎಸ್.ಜಿ ವೊಂಬಟ್ಕೆರೆ ಅನ್ನೋರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ದೇಶದ್ರೋಹ ಕಾನೂನು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆ. ಅದನ್ನು ತೆಗೆದು ಹಾಕಬೇಕು ಅಂತ ಒತ್ತಾಯಿಸಿದ್ರು. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಈ ಅರ್ಜಿ ವಿಚಾರಣೆ ನಡೀತು. ಈ ವೇಳೆ ಮಾತನಾಡಿದ ಎನ್ವಿ ರಮಣ, ಈ ಕಾನೂನು ಕಾರ್ಪೆಂಟರ್ ಕೈಗೆ ಗರಗಸ ಕೊಟ್ಟಂಗೆ.. ಆತ ಇಡೀ ಅರಣ್ಯವನ್ನು ನಾಶ ಮಾಡಿ ಹಾಕ್ತಾನೆ.. ಅಷ್ಟಕ್ಕೂ ಇದು ವಸಾಹತುಶಾಹಿ ಕಾನೂನು.. ಬ್ರಿಟಿಷರು ಮಹಾತ್ಮಾ ಗಾಂಧೀಜಿಯವರನ್ನು ಸುಮ್ಮನಾಗಿಸಲು, ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಈ ಕಾನೂನು ಬಳಸಿಕೊಂಡಿದ್ರು. ಸ್ವಾತಂತ್ರ್ಯ ಬಂದು 75 ವರ್ಷ ಆಗ್ತಾ ಬಂದ್ರೂ ಇನ್ನೂ ಈ ಕಾನೂನಿನ ಅಗತ್ಯತೆ ಇದೆಯಾ ಅಂತ ಪ್ರಶ್ನಿಸಿದ್ದಾರೆ. ಈಗ ಗ್ರಾಮದಲ್ಲಿ ಯಾರನ್ನಾದ್ರೂ ಸಿಲುಕಿಸಬೇಕಾದ್ರೆ ಪೊಲೀಸರು ಈ ಕೇಸ್ ಬಳಸಬಹುದು. ಇದ್ರಿಂದ ಈ ಕಾನೂನು ಮಿಸ್ ಯೂಸ್ ಆಗೋ ಸಾಧ್ಯತೆ ಜಾಸ್ತಿ ಇರುತ್ತೆ. ಇತಿಹಾಸ ನೋಡಿದ್ರೆ ಕೆಲವೇ ಕೆಲವು ದೇಶದ್ರೋಹ ಪ್ರಕರಣಗಳಲ್ಲಿ ಮಾತ್ರವೇ ಆರೋಪ ಸಾಬೀತಾಗಿದೆ. ಈ ಸಂಬಂಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲವನ್ನು ಒಟ್ಟಿಗೆ ವಿಚಾರಣೆ ಮಾಡ್ತೀವಿ ಅಂತ ಸಿಜೆ ಎನ್ವಿ ರಮಣ ಹೇಳಿದ್ದಾರೆ. ಜೊತೆಗೆ ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ.
-masthmagaa.com
Contact Us for Advertisement