ಕೈ-ಕಾಲ ಕತ್ತರಿಸಿದ ದೇಹ ಪತ್ತೆ ಕೇಸ್​: ಖಡ್ಗ ಮತ್ತು ರಕ್ತದ ಬಟ್ಟೆ ಪತ್ತೆ!

masthmagaa.com:

ಇತ್ತೀಚೆಗೆ ದೆಹಲಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದ ಸ್ಥಳದಲ್ಲಿ ಮೃತದೇಹ ಪತ್ತೆಯಾದ ಪ್ರಕರಣ ಸಂಬಂಧ ಆಯುಧವನ್ನು ಹರ್ಯಾಣದ ಸೋನೆಪತ್​​ ಪೊಲೀಸರು ಪತ್ತೆಹಚ್ಚಿದ್ದಾರೆ. ಕೇಸ್​ನಲ್ಲಿ ಅರೆಸ್ಟ್ ಆಗಿರೋ ಇಬ್ಬರು ನಿಹಂಗಗಳಿಗೆ ಸೇರಿದ ಖಡ್ಗಗಳು ಮತ್ತು ಅವರ ರಕ್ತಸಿಕ್ತವಾದ ಬಟ್ಟೆಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಜನರು ಅರೆಸ್ಟ್​ ಆಗೋ ಸಾಧ್ಯತೆ ಇದೆ. ಹರಿಯಾಣ ಪೊಲೀಸರು ಈಗಾಗಲೇ ತನಿಖೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ.

-masthmagaa.com

Contact Us for Advertisement

Leave a Reply