ಮುಂದಿನ ಬಾರಿ ನಾನೇ ಸಿಎಂ! ಅಖಾಡಕ್ಕೆ ಧುಮುಕಿ ರೇಸ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಸಿಎಂ ಬೊಮ್ಮಾಯಿ!

 

masthmagaa.com

ಚುನಾವಣೆ ಹತ್ತಿರದಲ್ಲಿರುವಾಗಲೇ ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ ಬಳಿಕ ಈಗ ಬಿಜೆಪಿಯಲ್ಲೂ ಪೈಪೋಟಿ ಶುರುವಾಗುವ ಲಕ್ಷಣ ಕಾಣಿಸ್ತಿದೆ. ಬಿಜೆಪಿ ಗೆದ್ರೆ ಪ್ರಹ್ಲಾದ್‌ ಜೋಷಿ ಸಿಎಂ ಆಗ್ತಾರೆ, ಈ ಬಾರಿ ಜಗದೀಶ್‌ ಶೆಟ್ಟರ್‌ಗೆ ಅವಕಾಶ ಇದೆ, ಆರ್‌ ಅಶೋಕ್‌ ಕೂಡ ಸಿಎಂ ಕ್ಯಾಂಡಿಡೇಟ್ ಅನ್ನೋ ಮಾತುಗಳು ಕೇಳಿ ಬರ್ತಿದ್ವು. ಆದ್ರೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಕುರ್ಚಿಗೆ ಮತ್ತೊಮ್ಮೆ ಟವಲ್‌ ಹಾಕಿದ್ದಾರೆ. ಮುಂದಿನ ಬಾರಿ ನಾನೇ ಮುಖ್ಯಮಂತ್ರಿಯಾಗಿ ಬರ್ತೀನಿ ಅಂತ ಹೇಳುವ ಮೂಲಕ ಸಿಎಂ ರೇಸ್‌ಗೆ ದೊಡ್ಡ ಎಂಟ್ರಿ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಬೊಮ್ಮಾಯಿ, ʻಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಸಾವಿರಾರು ಅಭಿವೃದ್ಧಿ ಕೆಲಸ ಮಾಡಿದ್ದೀನಿ. ಆದ್ರೆ ಈ ಮುರುಗೇಶ್ ನಿರಾಣಿ ‌ನನ್ನನ್ನೇ ಕರೆದಿಲ್ಲ. ಆದ್ರೆ ಚಿಂತೆ ಮಾಡಬೇಡಿ ಮುಂದಿನ ಸಲ ನಾನೇ ಸಿಎಂ ಆಗಿ ಬರ್ತೀನಿ ಅಂತ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿಯವರೇ ಕಣಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ. ಕಳೆದ ಕೆಲದಿನಗಳ ಹಿಂದೆಯಷ್ಟೇ ಬಾಲಚಂದ್ರ ಜಾರಕಿಹೊಳಿ ಲಿಂಗಾಯತರೇ ಮುಂದಿನ ಸಿಎಂ ಅಂತ ಹೇಳಿದ್ರು. ಈ ಕಡೆ ಕುಮಾರಸ್ವಾಮಿ ಪ್ರಹ್ಲಾದ್‌ ಜೋಷಿ ಸಿಎಂ ಮಾಡೋಕೆ ತಯಾರಿ ನಡೆಯುತ್ತಿದೆ ಅಂತ ಬಾಂಬ್‌ ಎಸೆದಿದ್ರು. ಈ ಮಧ್ಯೆ ಈಗ ಬೊಮ್ಮಾಯಿಯವರೇ ಅಖಾಡಕ್ಕೆ ಇಳಿದಿದ್ದಾರೆ

-masthmagaa

Contact Us for Advertisement

Leave a Reply