masthmagaa.com:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಕಂಪ್ಲೀಟಾಗಿ ನಿಷೇಧಿಸಿದ್ದಾರೆ. ಈ ಸಂಬಂಧ ಅಗತ್ಯ ಪ್ಲಾನಿಂಗ್ ಮಾಡಿಕೊಳ್ಳಲು, ಈ ವ್ಯಾಪಾರಗಳಲ್ಲಿ ತೊಡಗಿರುವವರು ಬೇರೆ ವ್ಯಾಪಾರ ಆರಂಭಿಸಲು ವ್ಯವಸ್ಥೆ ಮಾಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಕ್ನೋದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಈ ಉದ್ಯಮಗಳಲ್ಲಿ ತೊಡಗಿರುವವರು ಹಾಲು ಮಾರಾಟ ಮಾಡುವ ಮೂಲಕ ಮಥುರಾದ ವೈಭವವನ್ನು ಹೆಚ್ಚಿಸಬೇಕು ಅಂತ ಕೂಡ ಕರೆ ನೀಡಿದ್ದಾರೆ.
-masthmagaa.com
Contact Us for Advertisement