ಭಾರತದ ಏಟಿಗೆ ಬೆಚ್ಚಿಬಿದ್ದ ಪಾಕ್ ಮಾಡಿದ್ದೇನು..?

masthmagaa.com:

ಜಮ್ಮು ಕಾಶ್ಮೀರ: ಗಡಿ ನಿಯಂತ್ರಣ ರೇಖೆಯಲ್ಲಿ ನಿನ್ನೆ ಗಡಿ ನುಸುಳುವ ಉದ್ದೇಶದಿಂದ ನಡೆಸಲಾದ ಕದನ ವಿರಾಮ ಉಲ್ಲಂಘನೆಗೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನ ಸೇನೆಯ 11 ಮಂದಿ ಯೋಧರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಇದ್ರಿಂದ ಉರಿದುಕೊಂಡಿರೋ ಪಾಪಿ ಪಾಕಿಸ್ತಾನಕ್ಕೆ ಏನು ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ.. ಹೀಗಾಗಿ ಭಾರತದ ರಾಯಭಾರಿಗೆ ಸಮನ್ಸ್ ನೀಡಿದೆ. ಅಲ್ಲದೆ ಇಂದು ಪಾಕಿಸ್ತಾನ ಸೇನೆಯ ಡಿಜಿ ಮತ್ತು ವಿದೇಶಾಂಗ ಸಚಿವ ಎಂ.ಎಂ ಖುರೇಷಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರತದಲ್ಲಿ ಏನಾದ್ರು ನರಿಬುದ್ಧಿ ತೋರಿಸಬೇಕು ಅನ್ನೋದು ಪಾಕ್ ಆಸೆ.. ಅದಕ್ಕಾಗಿ ನಿನ್ನೆ ಗಡಿ ನಿಯಂತ್ರಣ ರೇಖೆ ಮೂಲಕ ಹಲವು ಉಗ್ರರನ್ನು ನುಸುಳಿಸಲು ಯತ್ನಿಸಿತ್ತು. ಈ ಗುಂಡಿನ ದಾಳಿಯಲ್ಲಿ ಭಾರತದ ಐವರು ಯೋಧರು ಹುತಾತ್ಮರಾಗಿದ್ದು, 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಆದ್ರೂ ಕೂಡ ಪಾಕಿಗಳನ್ನು ಹಿಮ್ಮೆಟ್ಟಿಸುವಲ್ಲಿ ನಮ್ಮ ಯೋಧರು ಯಶಸ್ವಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply