masthmagaa.com:
ನಿನ್ನೆ ಒಂದೇ ದಿನ 48 ಹೊಸ ಪ್ರಕರಣಗಳು ದೃಢಪಟ್ಟು ದಾಖಲೆ ಬರೆದಿದ್ದ ರಾಜ್ಯದಲ್ಲಿ ಕೊರೋನಾ ಆರ್ಭಟ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಇವತ್ತು ಮತ್ತೆ 36 ಮಂದಿಯಲ್ಲಿ ಹೊಸದಾಗಿ ಕಾಯಿಲೆ ಪತ್ತೆಯಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.
36 ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲೇ 12 ಪ್ರಕರಣಗಳು ದೃಢಪಟ್ಟಿವೆ.
ಉತ್ತರ ಕನ್ನಡದ ಭಟ್ಕಳದಲ್ಲಿ 7 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 6 ಮಂದಿ ರೋಗಿ ನಂಬರ್ 659ರ (18 ವರ್ಷದ ಯುವತಿಯ) ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.
ದಾವಣಗೆರೆಯಲ್ಲಿ 6 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಐವರು ರೋಗಿ ನಂಬರ್ 651ರ (48 ವರ್ಷದ ಮಹಿಳೆಯ) ಸಂಪರ್ಕಕಕ್ಕೆ ಬಂದವರಾಗಿದ್ದಾರೆ.
ಚಿತ್ರದುರ್ಗದ ಮೂವರಲ್ಲಿ ಸೋಂಕು ಪತ್ತಯಾಗಿದೆ. ಎಲ್ಲರೂ ಗುಜರಾತ್ನ ಅಹಮದಾಬಾದ್ಗೆ ಪ್ರಯಾಣ ಮಾಡಿದವರಾಗಿದ್ದಾರೆ.
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ರೋಗಿ ನಂಬರ್ 578ರ (69 ವರ್ಷದ ವೃದ್ಧ) ಸಂಪರ್ಕಕ್ಕೆ ಬಂದವರಾಗಿದ್ದಾರೆ.
ಉಳಿದಂತೆ ಬೀದರ್ನಲ್ಲಿ 3, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಇದುವರೆಗೆ 30 ಮಂದಿ ಪ್ರಾಣ ಕಳೆದುಕೊಂಡಿದ್ದು, 379 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
-masthmagaa.com
Contact Us for Advertisement