masthmagaa.com:
ಒಂದು ಕಡೆ ದೇಶ ಕಾಯಿಲೆ ವಿರುದ್ಧ ಹೋರಾಡುತ್ತಿದೆ. ಅದೇ ಸಂದರ್ಭದಲ್ಲಿ ಮತ್ತೊಂದು ಕಡೆ ದೇಶದ ಗೃಹಮಂತ್ರಿ ಅಮಿತ್ ಶಾ ಆರೋಗ್ಯ ತುಂಬಾ ಹದಗೆಟ್ಟಿದೆ ಅಂತ ವದಂತಿಗಳನ್ನು ಹರಿದಾಡಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟ ಹಾಗೆ ಸ್ವತಃ ಗೃಹಮಂತ್ರಿ ಅಮಿತ್ ಶಾ ಇವತ್ತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ನನ್ನ ಕೆಲ ಹಿತಚಿಂತಕರು ನನಗೆ ಹುಷಾರಿಲ್ಲ ಅಂತ ಗಾಳಿಸುದ್ದಿ ಹಬ್ಬಿಸುತ್ತಿದ್ದರು. ಇನ್ನೂ ಕೆಲ ಹಿತಚಿಂತಕರಂತೂ ನಾನು ಸಾಯಲಿ ಅಂತ ಪ್ರಾರ್ಥನೆಯನ್ನೂ ಮಾಡಿದರು. ಆದರೆ ಮಧ್ಯರಾತ್ರಿವರೆಗೂ ಈ ಕಾಯಿಲೆ ವಿರುದ್ಧದ ಹೋರಾಟದಲ್ಲಿ ದೇಶದ ಗೃಹ ಮಂತ್ರಿಯಾಗಿ ನಾನು ಕಠಿಣ ಪರಿಶ್ರಮ ಮಾಡುತ್ತಿದ್ದ ಕಾರಣ ಈ ವಿಚಾರಗಳ ಕಡೆ ಗಮನ ಕೊಡಲಿಲ್ಲ.
ನಂತರ ನಿಧಾನಕ್ಕೆ ವಿಚಾರನ್ನ ಗಮನಕ್ಕೆ ತರಲಾಯಿತು. ಆದರೂ ಸಹ ನಾನು ಇದಕ್ಕೆಲ್ಲ ಮಹತ್ವ ನೀಡಲಿಲ್ಲ. ಆದರೆ ನಾನು ಸುಮ್ಮನಿದ್ದರೆ ನಿಜವಾಗಿಯೂ ನನ್ನ ಬಗ್ಗೆ ಕಳಕಳಿ ಇರುವ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಚಿಂತೆ ಆಗಬಹುದು ಅನ್ನೋ ಕಾರಣಕ್ಕಾಗಿ ಈ ರೀತಿ ಪತ್ರ ಬರೆದು ಎಲ್ಲ ಗೊಂದಲಗಳಿಗೆ ತೆರೆ ಎಳೆಯುತ್ತಿದ್ದೇನೆ. ಹಿಂದೂ ನಂಬಿಕೆಗಳ ಪ್ರಕಾರ ಯಾರದಾದರೂ ಸಾವು ಆಗಲಿ ಅಂತ ಹಾರೈಸಿದ್ರೆ ಅವರ ಆಯಸ್ಸು ಮತ್ತು ಆರೋಗ್ಯ ಮತ್ತಷ್ಟು ಉತ್ತಮಗೊಳ್ಳುತ್ತದಂತೆ ಅಂತಾ ಅಮಿತ್ ಶಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
मेरे स्वास्थ्य की चिंता करने वाले सभी लोगों को मेरा संदेश। pic.twitter.com/F72Xtoqmg9
— Amit Shah (@AmitShah) May 9, 2020
-masthmagaa.com
Contact Us for Advertisement