ರಾಜಕೀಯ ನಾಯಕರಿಂದಲೂ ಕೊರೋನಾ ರೂಲ್ಸ್​ ಉಲ್ಲಂಘನೆ!

masthmagaa.com:

ವಿಧಾನ ಪರಿಷತ್​ನ 25 ನೂತನ ಸದಸ್ಯರಿಗೆ ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮ ಇವತ್ತು ನಡೀತು. ಕಾರ್ಯಕ್ರಮಕ್ಕೆ ನೂರಾರು ಜನ ಬಂದಿದ್ರು. ಸಿಎಂ ಬೊಮ್ಮಾಯಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವರು, ಶಾಸಕರು, ಅವರ ಬೆಂಬಲಿಗರು ಬಂದಿದ್ರು. ಇದರಲ್ಲಿ ಸಾಕಷ್ಟು ಜನ ಮಾಸ್ಕ್​ ಹಾಕ್ಕೊಂಡಿರಲಿಲ್ಲ, ದೈಹಿಕ ಅಂತರ ಅಂತೂ ಕೇಳೋದೇ ಬೇಡ. ರಾಜ್ಯದಲ್ಲಿ ಕೊರೋನಾ ಹೆಚ್ಚಾಗ್ತಿದೆ ಅಂತ ಸರ್ಕಾರ ಅದು ಇದು ಅಂತ ರೂಲ್ಸ್ ತರ್ತಿದೆ. ಆದ್ರೆ ಈ ರೂಲ್ಸ್ ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ವಾ ಅನ್ನೋ ಅನುಮಾನ ಮೂಡಿಸುವಂತಿದೆ ಈ ನಡೆ. ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್​, ಇಲ್ಲಿ ಕೊರೋನಾ ಇಲ್ವಾ. ಇಲ್ಲಿ ರೂಲ್ಸ್ ಫಾಲೋ ಆಗ್ತಿದಿಯಾ? ಗೃಹ ಸಚಿವರು ಏನ್ ಮಾಡ್ತಿದ್ದಾರೆ? ಇಲ್ಲಿ ಬಂದವರೆ ಮೇಲೆ ಯಾಕೆ ಕೇಸ್​ ಹಾಕಿಲ್ಲ? ನಾವು ಪಾದಯಾತ್ರೆ ಮಾಡೇ ಮಾಡ್ತೀವಿ. ನನ್ನನ್ನ ಅರೆಸ್ಟ್ ಮಾಡೋದಾದ್ರೆ ಮಾಡಲಿ ಅಂತ ಹೇಳಿದ್ರು. ಹೀಗೆ ಮಾತನಾಡುವಾಗ ಡಿಕೆಶಿ ಮತ್ತು ಅವರ ಹಿಂದೆ ನಿಂತೋರು ಕೂಡ ಮಾಸ್ಕ್​ ಧರಿಸಿರಲಿಲ್ಲ.

-masthmagaa.com

Contact Us for Advertisement

Leave a Reply