masthmagaa.com:
ಬಿಹಾರದಲ್ಲೊಬ್ಬರು ಹಾವುಗಳ ಜೊತೆಗೆ ರಾಕಿ ಹಬ್ಬ ಮಾಡೋಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಸರನ್ ಜಿಲ್ಲೆಯ ಹಾವಾಡಿಗ ಮನಮೋಹನ್, ತನ್ನ ತಂಗಿ ಕೈಲಿ ಹಾವುಗಳಿಗೆ ರಾಕಿ ಕಟ್ಟಿಸಲು ಯತ್ನಿಸಿದ್ದಾರೆ. ಈ ವೇಳೆ ಸುತ್ತಲೂ ಹಲವಾರು ಜನ ನಿಂತು ವಿಡಿಯೋ ರೆಕಾರ್ಡ್ ಮಾಡ್ತಿದ್ರು. ಈ ವೇಳೆ ಒಂದು ಹಾವು ಎಗರಿ ಅವರ ಕಾಲಿಗೆ ಕಚ್ಚಿದೆ. ಇದ್ರಿಂದ ಮನಮೋಹನ್ ಪ್ರಾಣ ಹೋಗಿದೆ. ಇದು ಹಾವಿನ ಕಥೆಯಾದ್ರೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ ನಾಯಿಗೆ ದೊಣ್ಣೆಯಿಂದ ಹೊಡೆದಿರೋ ವಿಡಿಯೋವೊಂದು ವೈರಲ್ ಆಗಿದೆ. ವ್ಯಕ್ತಿ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
-masthmagaa.com
Contact Us for Advertisement