ನಿಜ್ಜರ್‌ ಕೇಸ್‌: ಭಾರತದ ವಿರುದ್ದ ಮತ್ತೆ ನಾಲಿಗೆ ಹರಿಬಿಟ್ಟ ಟ್ರುಡು!

masthmagaa.com:

ಕೆನಡ ಪ್ರಧಾನಿ ಜಸ್ಟೀನ್‌ ಟ್ರುಡು, ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಮತ್ತೊಮ್ಮೆ ಮಾತಾಡಿದ್ದಾರೆ. ಅಲ್ದೆ ಭಾರತದ ಮೇಲೆ ನಾವು ಸುಮ್ ಸುಮ್ನೆ ಆರೋಪ ಮಾಡಿಲ್ಲ ಅಂತ ತಮ್ಮ ಹಳೇ ಮೊಂಡು ವಾದವನ್ನ ಮುಂದುವರೆಸಿದ್ದಾರೆ. ಇಂಟರ್‌ವ್ಯೂ ಒಂದರಲ್ಲಿ ಭಾಗವಹಿಸಿದ್ದ ಟ್ರುಡು ಅವರನ್ನ ನಿಜ್ಜರ್‌ ಹತ್ಯೆ ತನಿಖೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಭಾರತ ಹರ್ದಿಪ್‌ ಸಿಂಗ್‌ ವಿಚಾರದಲ್ಲಿ ಮೊದಲು ಕೆನಡಾದವರು ತನಿಖೆ ಮಾಡಲಿ ಅಂತ ಬಯಸ್ತಿದೆ. ಕೆನಡ ಹತ್ರ ಆಧಾರ ಇದೆ ಅಂತ ಹೇಳ್ತಿದ್ದೀರ. ಭಾರತದವ್ರು ಸಹಕಾರ ಕೊಡ್ತಾರಾ ಅಂತ ಕೇಳಲಾಗಿತ್ತು. ಈ ಬಗ್ಗೆ ಮಾತಾಡಿರೋ ಟ್ರುಡು ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಅನ್ನೋದನ್ನ ನಾವು ಸುಮ್ನೆ ಹೇಳ್ತಿಲ್ಲ. ಎಲ್ಲಾ ಕೆನಡದ ಪ್ರಜೆಗಳನ್ನ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿ. ಹೊರ ದೇಶಗಳು ಅದನ್ನ ಉಲ್ಲಂಘನೆ ಮಾಡೋಕೆ ಸಾಧ್ಯವಿಲ್ಲ. ನಾವು ಇದನ್ನ ಗಂಭೀರವಾಗಿ ತಗೊಂಡಿದ್ದೀವಿ. ನಿಜ್ಜರ್‌ ಹತ್ಯೆ ತನಿಖೆಗೆ ಭಾರತ ಸಹಕಾರ ಕೊಡುತ್ತೆ ಅಂತ ಭಾವಿಸಿದ್ದೇವೆ. ಭಾರತ ಸರ್ಕಾರದೊಂದಿಗೆ ಈ ಕುರಿತು ರಚನಾತ್ಮಕವಾಗಿ ಕೆಲಸ ಮಾಡ್ತಿದ್ದೀವಿ ಅಂತ ಕೆನಡ ಪ್ರಧಾನಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply