masthmagaa.com:
ಸೋನಿಯಾ ಗಾಂಧಿ ಆಪ್ತ ವಿನ್ಸೆಂಟ್ ಜಾರ್ಜ್ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದ್ದು ಈ ಕೂಡಲೇ ಬಂಗಲೆ ಖಾಲಿ ಮಾಡುವಂತೆ ಖಡಕ್ ಸೂಚನೆ ನೀಡಿದೆ. ಈ ವಿನ್ಸೆಂಟ್, ಕಾಂಗ್ರೆಸ್ಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯಲ್ಲಿ ಉಳ್ಕೊಂಬಿಟಿದ್ದಾರೆ. ಈಗ ಸುಮಾರು 3.08 ಕೋಟಿಯಷ್ಟು ಬಾಡಿಗೆ ಬಾಕಿ ಉಳಿಸಿಕೊಂಡಿದ್ದು ನೋಟಿಸ್ ಕಳುಹಿಸಲಾಗಿದೆ ಅಂತ DE (ಡೈರೋಕ್ಟೇರೇಟ್ ಆಫ್ ಎಸ್ಟೇಟ್) ಮಾಹಿತಿ ನೀಡಿದೆ. ಅಂದ್ಹಾಗೆ ದೆಹಲಿಯ ಚಾಣಕ್ಯಪುರಿ ಎಸ್ಟೇಟ್ನಲ್ಲಿರುವ ಇವರ ನಿವಾಸವನ್ನ ಅಧಿಕೃತವಾಗಿ ಕಾಂಗ್ರೇಸ್ ಪಾರ್ಟಿಗೆ ಹಂಚಿಕೆ ಮಾಡಲಾಗಿತ್ತು. ಆದ್ರೆ ಇದರ ಅವಧಿ 2013ಕ್ಕೇ ಮುಗಿದಿದ್ದು ಈಗ ಅವಧಿ ಕಳೆದರೂ ಕೂಡ ಜಾಗ ಖಾಲಿ ಮಾಡಿಲ್ಲ. ಇದು ಅಕ್ರಮ ಅನ್ನೋದು DE ಆರೋಪ. ಇನ್ನು ಈ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೇ ನೋಟಿಸ್ ನೀಡಲಾಗಿದ್ದು ಮೂರು ದಿನಗಳೊಳಗೆ ಉತ್ತರ ನೀಡ್ಬೇಕು ಅಂತ ಡೆಡ್ ಲೈನ್ ನೀಡಿದೆ.
-masthmagaa.com
Contact Us for Advertisement