masthmagaa.com:
ದೆಹಲಿ: ರೋಹಿಂಗ್ಯ ಮುಸ್ಲಿಂ ನಿರಾಶ್ರಿತರನ್ನು ಗುರುತಿಸಿ, ಸ್ಕ್ರೀನಿಂಗ್ ನಡೆಸುವಂತೆ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ರೋಹಿಂಗ್ಯಾ ನಿರಾಶ್ರಿತರು ತಬ್ಲಿಘಿ ಜಮಾತ್ನ ಸದಸ್ಯರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇರೋದ್ರಿಂದ ಈ ಹೆಜ್ಜೆ ಇಟ್ಟಿದೆ. ಅಲ್ಲದೆ ನಿರಾಶ್ರಿತ ಕ್ಯಾಂಪ್ನಿಂದ ನಾಪತ್ತೆಯಾಗಿರುವವರನ್ನು ಕೂಡ ಪತ್ತೆಹಚ್ಚುವಂತೆ ಎಲ್ಲಾ ರಾಜ್ಯಗಳ ಡಿಜಿಪಿಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ.
ರೋಹಿಂಗ್ಯ ಮುಸ್ಲಿಮರು ತಬ್ಲಿಘಿ ಜಮಾತ್ನ ಇಜ್ತೆಮಾ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರಿಗೂ ಕೂಡ ಕೊರೋನಾ ತಗುಲಿರುವ ಸಾಧ್ಯತೆ ಇದೆ. ಅದರಲ್ಲೂ ಹೈದ್ರಾಬಾದ್, ತೆಲಂಗಾಣದ ರೋಹಿಂಗ್ಯ ಮುಸ್ಲಿಮರು ಹರಿಯಾಣದ ಮೇವತ್ನಲ್ಲಿ ನಡೆದ ಇಜ್ತೆಮಾ ಸೇರಿದಂತೆ ತಬ್ಲಿಘಿ ಜಮಾತ್ನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ್ರು. ಅದೇ ರೀತಿ ದೆಹಲಿಯ ಶ್ರಮ್ ವಿಹಾರ್ ಮತ್ತು ಶಹೀನ್ಭಾಗ್ನಿಂದಲೂ ಈ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾಗಿದ್ರು. ಆದ್ರೆ ಅವರ್ಯಾರು ತಮ್ಮ ಕ್ಯಾಂಪ್ಗಳಿಗೆ ವಾಪಸ್ಸಾಗಿಲ್ಲ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಹರಿಯಾಣ, ಹೈದ್ರಾಬಾದ್, ತೆಲಂಗಾಣ, ದೆಹಲಿ, ಪಂಜಾಬ್, ಜಮ್ಮುವಿನಲ್ಲಿ ರೋಹಿಂಗ್ಯ ನಿರಾಶ್ರಿತರನ್ನು ಪತ್ತೆಹಚ್ಚಲು ವಿಶೇಷ ಗಮನ ನೀಡಬೇಕು.. ಅಲ್ಲದೆ ಅವರನ್ನು ಸ್ಕ್ರೀನಿಂಗ್ಗೆ ಒಳಪಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಇಲಾಖೆ ತಿಳಿಸಿದೆ.
-masthmagaa.com
Contact Us for Advertisement