ಹಿಂದೂ ಹೆಸರಲ್ಲಿ ಮುಸ್ಲಿಂ ವ್ಯಕ್ತಿ ತರಕಾರಿ ಮಾರಾಟ! ಬಿಜೆಪಿ ಶಾಸಕ ಮಾಡಿದ್ದೇನು..?

masthmagaa.com:

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ತನ್ನ ಏರಿಯಾಗೆ ತರಕಾರಿ ಮಾರಲು ಬಂದ ವ್ಯಕ್ತಿಯನ್ನು ಬಿಜೆಪಿ ಶಾಸಕರೊಬ್ಬರು ಓಡಿಸಿದ್ದಾರೆ. ಅಲ್ಲದೆ ಇನ್ಮುಂದೆ ಈ ಏರಿಯಾಗೆ ತರಕಾರಿ ಮಾಡಲು ಬಂದ್ರೆ ಹುಷಾರ್ ಎಂದು ಬೆದರಿಕೆ ಹಾಕಿದ್ದಾರೆ.

ಮಹೋಬಾ ಜಿಲ್ಲೆಯ ಚರಖಾರಿ ಕ್ಷೇತ್ರದ ಬಿಜೆಪಿ ಶಾಸಕ ಬೃಜಭೂಷಣ್ ರಾಜ್​ಪೂತ್​ ತಮ್ಮ ನಿವಾಸದಲ್ಲಿದ್ರು. ಈ ವೇಳೆ ತರಕಾರಿ ಮಾರುತ್ತಾ ವ್ಯಕ್ತಿಯೊಬ್ಬರು ಬಂದಿದ್ದಾರೆ. ಈ ವೇಳೆ ಶಾಸಕ ಬೃಜ್​ ಭೂಷಣ್ ಹೆದರಿಸಿ ಓಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮುಸ್ಲಿಂ ಆಗಿದ್ರೂ ಕೂಡ ಹಿಂದೂ ಹೆಸರು ಹೇಳಿಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ.. ಹೀಗಾಗಿ ಈ ಏರಿಯಾಗೆ ಬರದಂತೆ ಸೂಚಿಸಿದ್ದೇನೆ ಎಂದಿದ್ದಾರೆ.

ನಿನ್ನೆಯಷ್ಟೇ ಉತ್ತರ ಪ್ರದೇಶದ ಶಾಸಕ ಸುರೇಶ್ ತಿವಾರಿ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ ಎಂದು ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು.

ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ ನಡ್ಡಾ ಈಗಾಗಲೇ ವಿವಾದಾತ್ಮಕ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ಜೊತೆಗೆ ನಾಲಗೆ ಹರಿಬಿಟ್ಟರೆ ಕಠಿಣ ಕ್ರಮ ಕೈಗೊಳ್ಳೋದಾಗಿಯೂ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply