ತಿನ್ನಬೇಕು ಅನಿಸಿದ್ರೆ ಗೋಮಾಂಸನೂ ತಿಂತೀನಿ, ಹಂದಿ ಮಾಂಸನೂ ತಿಂತೀನಿ!

masthmagaa.com:

ಗೋಮಾಂಸ ವಿಚಾರವಾಗಿ ಮಾತನಾಡಿ ಸುದ್ದಿಯಾಗಿದ್ದ ಮಾಜಿ ಸಿಎಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಮತ್ತೆ ಅದರ ಬಗ್ಗೆ ಮಾತನಾಡಿದ್ದಾರೆ. ‘ನಾನು ಇದುವರೆಗೆ ಗೋಮಾಂಸ ಅಥವಾ ಹಂದಿ ಮಾಂಸವನ್ನ ತಿಂದಿಲ್ಲ. ತಿನ್ನಬೇಕು ಅನಿಸಿದಾಗ ತಿಂತೀನಿ. ಅದನ್ನ ಕೇಳುವ ಅಧಿಕಾರ ಯಾರಿಗೂ ಇಲ್ಲ. ಯಾರಿಗೆ ಏನು ತಿನ್ನಬೇಕು ಅನಿಸುತ್ತೋ ಅದನ್ನ ತಿನ್ನಬಹುದು. ಈ ವಿಚಾರವನ್ನ ಯಡಿಯೂರಪ್ಪನವರಿಗೆ ಸ್ಪಷ್ಟವಾಗಿ ಹೇಳ್ತಿದ್ದೇನೆ’ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತೀಚೆಗಷ್ಟೇ ‘ಕೊಡವರು ಕೂಡ ಗೋಮಾಂಸ ತಿಂತಾರೆ’ ಅಂತ ಹೇಳುವ ಮೂಲಕ ಸಿದ್ದರಾಮಯ್ಯ ವಿವಾದಕ್ಕೆ ಗುರಿಯಾಗಿದ್ರು. ಈ ಸಂಬಂಧ ಕೊಡವ ಸಮುದಾಯದವರೊಬ್ರು ಸಿದ್ದರಾಮಯ್ಯ ವಿರುದ್ಧ ದೂರು ಕೂಡ ದಾಖಲಿಸಿದ್ರು.

-masthmagaa.com

Contact Us for Advertisement

Leave a Reply