masthmagaa.com:
ಮಂಗಳೂರಿನ ಮಸೀದಿಯೊಂದನ್ನ ನವೀಕರಣ ಮಾಡಲು ಅದರ ಮುಂಭಾಗ ಕೆಡವಿದ್ದ ವೇಳೆ ಮಸೀದಿಯ ಹಿಂಭಾಗದಲ್ಲಿ ದೇವಸ್ಥಾನದ ಕಳಶ, ಕಂಬಗಳ ಮಾದರಿಗಳು ಪತ್ತೆಯಾಗಿವೆ. ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯಲ್ಲಿ ಈ ಘಟನೆ ನಡೆದಿದೆ. ಇದ್ರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕೋರ್ಟ್ ಮೆಟ್ಟಿಲೇರಿದ್ದು, ಮಸೀದಿ ನವೀಕರಣ ಕಾಮಗಾರಿಗೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜೊತೆಗೆ ಯಾವುದೇ ಮಾದರಿಯನ್ನು ಕಿತ್ತು ಹಾಕ್ಬಾರ್ದು ಅಥವಾ ಹಾನಿ ಮಾಡ್ಬಾರ್ದು, ಯಥಾಸ್ಥಿತಿಯನ್ನು ಕಾಪಾಡಬೇಕು ಅಂತ ಆದೇಶಿಸಿದೆ. ಇನ್ನು ಗಂಜಿಮಠ ಗ್ರಾಮ ಪಂಚಾಯತಿಯವ್ರು ತನಿಖೆಯನ್ನ ಪುರಾತತ್ವ ಇಲಾಖೆಗೆ ನೀಡ್ಬೇಕು ಅಂತ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
-masthmagaa.com
Contact Us for Advertisement