masthmagaa.com:
ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಯಾವ ಏಜ್ ಗ್ರೂಪ್ನವರಿಗೂ ಬಿಟ್ಟಿಲ್ಲ, ಯಾವ ಊರನ್ನೂ ಬಿಟ್ಟಿಲ್ಲ. ಆದ್ರೆ ಧಾರವಾಡದ ಅಲ್ಲಾಪುರ ಗ್ರಾಮದಲ್ಲಿ ಎರಡನೇ ಅಲೆ ವೇಳೆ ಒಂದೇ ಒಂದು ಕೊರೋನಾ ಕೇಸ್ ವರದಿಯಾಗಿಲ್ಲ. ಎರಡನೇ ಅಲೆ ಅಂತಲ್ಲ, ಗ್ರಾಮದಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ದೃಢಪಟ್ಟಿಲ್ಲ ಅಂತ ಅಲ್ಲಿನ ಕೋವಿಡ್ ಟಾಸ್ಕ್ಫೋರ್ಸ್ನ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಇನ್ನು ಗ್ರಾಮಸ್ಥರೊಬ್ಬರು ಮಾತನಾಡಿ, ನನ್ನದೊಂದು ಹೋಟೆಲ್ ಇದೆ. ಆದ್ರೂ ಕೊರೋನಾ ಹಿನ್ನೆಲೆ ಅದನ್ನ ಓಪನ್ ಮಾಡಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದೇವೆ. ಬೇರೆ ಊರಿಗೂ ನಾವು ಹೋಗಿಲ್ಲ. ಇದೇ ನಮ್ಮ ಸಕ್ಸಸ್ ಮಂತ್ರ ಅಂತ ಹೇಳಿದ್ದಾರೆ.
-masthmagaa.com
Contact Us for Advertisement